ರಾತ್ರಿ 2 ಗಂಟೆಗೆ ಅಪ್ಪಳಿಸಲಿರುವ ನಿವಾರ್ ಚಂಡಮಾರುತ; NDRF ಸನ್ನದ್ಧ, 1 ಲಕ್ಷ ಮಂದಿ ಶಿಫ್ಟ್
Team Udayavani, Nov 25, 2020, 8:09 PM IST
ಮಣಿಪಾಲ: ಬಂಗಾಲಕೊಲ್ಲಿಯಿಂದ ನಿವಾರ್ ಚಂಡಮಾರುತವು ಗಂಟೆಗೆ 11 ಕಿ.ಮೀ ವೇಗದೊಂದಿಗೆ ಪುದುಚೇರಿಗೆ ಅಪ್ಪಳಿಸಲಿದೆ. ಇಂದು (ಬುಧವಾರ) ರಾತ್ರಿ 2 ಗಂಟೆಗೆ ಅದು ದಕ್ಷಿಣ ಕರಾವಳಿಯನ್ನು ಅಪ್ಪಳಿಸಲಿದ್ದು, ಅನಂತರ ಕಾರೈಕಲ್ (ಆಂಧ್ರಪ್ರದೇಶ) ಮತ್ತು ಮಹಾಬಲಿಪುರಂ (ತಮಿಳುನಾಡು) ದಾಟಲಿದೆ. ಈ ನಡುವೆ ಗಾಳಿಯು ಗಂಟೆಗೆ 145 ಕಿ.ಮೀ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ.
ಚಂಡಮಾರುತದ ಅಪಾಯದಿಂದ ಪಾರಾಗುವ ಸಲುವಾಗಿ ರಾಜ್ಯ ಸರಕಾರಗಳು ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ರಜೆಯನ್ನು ಘೋಷಿಸಲಾಗಿದೆ. ಈ 3 ದಿನಗಳ ಕಾಲ ಭಾರೀ ಮಳೆಯಾಗಲಿದೆ. ನೆರೆಯ ರಾಜ್ಯಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ.
ಚೆನ್ನೈ ವಿಮಾನ ನಿಲ್ದಾಣವನ್ನು ಬುಧವಾರ ಸಂಜೆ 7 ರಿಂದ ಗುರುವಾರ ಬೆಳಗ್ಗೆ 7 ರ ವರೆಗೆ ಮುಚ್ಚಲಾಗಿದೆ. 26 ವಿಮಾನಗಳನ್ನು ರದ್ದುಪಡಿಸಲಾಗಿದೆ. ಚೆನ್ನೈನ ಅನೇಕ ಸ್ಥಳಗಳಲ್ಲಿ ವಿದ್ಯುತ್ ಕಡಿತ ಮಾಡಲಾಗಿದೆ. ಚೆನ್ನೈ, ವೆಲ್ಲೂರು, ಕಡಲೂರು, ವಿಲ್ಲುಪುರಂ, ನಾಗಪಟ್ಟಣಂ, ತಿರುವರೂರು, ಚೆಂಗಲ್ಪಟ್ಟು ಮತ್ತು ಪೆರಂಬಲೋರ್ ಮುಂತಾದ ನಗರಗಳು ಸೇರಿದಂತೆ ತಮಿಳುನಾಡಿನ 13 ಜಿಲ್ಲೆಗಳಲ್ಲಿ ನವೆಂಬರ್ 26 ರ ವರೆಗೆ ರಜೆಯನ್ನು ಘೋಷಿಸಲಾಗಿದೆ. ಒಂದು ಲಕ್ಷ ಜನರನ್ನು ತಮಿಳುನಾಡಿನಿಂದ ಸ್ಥಳಾಂತರಿಸಲಾಗಿದ್ದು, 7 ಸಾವಿರ ಜನರನ್ನು ಪುದುಚೇರಿಯಿಂದ ಸ್ಥಳಾಂತರಿಸಲಾಗಿದೆ.
#CycloneNivar may make landfall after 2 am on November 26. Over one lakh people have been evacuated across Tamil Nadu and more than 1,000 people have been evacuated in Puducherry: NDRF Director-General SN Pradhan pic.twitter.com/3vS6vf6oVy
— ANI (@ANI) November 25, 2020
ತಮಿಳುನಾಡು, ಪುದುಚೇರಿ ಮತ್ತು ಆಂಧ್ರದಲ್ಲಿ 25 ತಂಡಗಳನ್ನು ಎನ್ಡಿಆರ್ಎಫ್ ನಿಯೋಜಿಸಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಂಡ ಸನ್ನದ್ಧವಾಗಿದೆ.
ನಿರಂತರ ಮಳೆ
ಕಳೆದ 24 ಗಂಟೆಗಳಿಂದ ಚೆನ್ನೈನಲ್ಲಿ ಮಳೆಯಾಗುತ್ತಿದೆ. ಅನೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಮಾಜಿ ಸಿಎಂ ಕರುಣಾನಿಧಿ ಅವರ ಮನೆಯೂ ಪ್ರವಾಹಕ್ಕೀಡಾಗಿದೆ. ಚೆನ್ನೈನಲ್ಲಿ 2015ರಲ್ಲಿ ಇಂತಹದ್ದೇ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಪಾಠಗಳನ್ನು ಸರಕಾರ ನೆನಪಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಶೇ. 90ರಷ್ಟು ತುಂಬಿದ ಚೇಂಬರ್ಂಬಕ್ಕಂ ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲಾಗಿದೆ. ಮೊದಲ ಹಂತದಲ್ಲಿ ಅಣೆಕಟ್ಟಿನಿಂದ 1000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಅಣೆಕಟ್ಟಿನಿಂದ ನೀರು ಅಡ್ಯಾರ್ ನದಿಗೆ ಹರಿಯಲಿದ್ದು, ನದಿಯ ಪ್ರದೇಶದ ಕೆಳಭಾಗಗಳಾದ ಕುಂದ್ರಾತೂರ್, ಸಿರುಕಲಥೂರ್, ತಿರುಮುಡಿವಕ್ಕಂ, ಮತ್ತು ತಿರುನಿರಾಮಲೈ ಮೊದಲಾದ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮಿಳುನಾಡು ಮತ್ತು ಪುದುಚೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದು, ಅಗತ್ಯ ಕ್ರಮಗಳ ಮಾಹಿತಿ ಪಡೆದುಕೊಂಡಿದ್ದಾರೆ. ಸಾಧ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಎರಡೂ ಸಿಎಂಗಳಿಗೆ ಪ್ರಧಾನಿ ಭರವಸೆ ನೀಡಿದ್ದಾರೆ.
The Severe Cyclonic Storm NIVAR over southwest Bay of Bengal moved west-northwestwards with a speed of 06 kmph during past six hours and lay centred at 0230 hrs IST of 25th November, 2020 over southwest Bay of Bengal @ndmaindia @rajeevan61 pic.twitter.com/B7MXWImDso
— India Meteorological Department (@Indiametdept) November 25, 2020
ಚಂಡಮಾರುತದ ಪರಿಣಾಮವನ್ನು ಎದುರಿಸಲು ಬಂಗಾಲಕೊಲ್ಲಿಯ ಆಗ್ನೇಯದಲ್ಲಿರುವ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯ ಬಳಿ ಕೋಸ್ಟ್ ಗಾರ್ಡ್ನ 8 ಹಡಗುಗಳು ಮತ್ತು 2 ವಿಮಾನಗಳನ್ನು ನಿಯೋಜಿಸಲಾಗಿದೆ. ಇನ್ನು ವ್ಯಾಪಾರಿ ಹಡಗುಗಳು ಮತ್ತು ಮೀನುಗಾರಿಕೆ ದೋಣಿಗಳಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ
Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ