ದಕ್ಷಿಣದ ಮೇಲೆ ನಿಜಾಮುದ್ದೀನ್‌ ಛಾಯೆ; ತಬ್ಲೀಘಿ ಸಮಾವೇಶಕ್ಕೆ ಹೋಗಿಬಂದವರಿಗಾಗಿ ತೀವ್ರಹುಡುಕಾಟ

ಹಿಂದಿರುಗಿದವರಲ್ಲಿ ಹಲವರಿಗೆ ಸೋಂಕು ದೃಢ

Team Udayavani, Apr 2, 2020, 4:50 AM IST

ದಕ್ಷಿಣದ ಮೇಲೆ ನಿಜಾಮುದ್ದೀನ್‌ ಛಾಯೆ; ತಬ್ಲೀಘಿ ಸಮಾವೇಶಕ್ಕೆ ಹೋಗಿಬಂದವರಿಗಾಗಿ ತೀವ್ರಹುಡುಕಾಟ

ಅಗರ್ತಲಾ: ಹೊಸದಿಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನು ಪರೀಕ್ಷೆಗಾಗಿ ಕರೆದೊಯ್ಯುತ್ತಿರುವುದು.

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ತಬ್ಲೀ – ಎ-ಜಮಾತ್‌ ಸಂಘಟನೆಯ ಧಾರ್ಮಿಕ ಸಮ್ಮೇಳನದ ಪರಿಣಾಮ ದಕ್ಷಿಣ ಭಾರತದ ಮೇಲೂ ಆವರಿಸಿದೆ. ಕರ್ನಾಟಕ ಸೇರಿದಂತೆ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೇರಿಗಳಿಂದ ಈ ಸಮಾವೇಶಕ್ಕೆ ಹೋಗಿದ್ದ ಹಲವರಲ್ಲಿ ಕೋವಿಡ್ 19 ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಅವರೆಲ್ಲರನ್ನೂ ಚಿಕಿತ್ಸೆಗೆ ಒಳಪಡಿಸಲಾಗಿದೆ. ಸೋಂಕು ಶಂಕಿತರನ್ನು ನಿಗಾ ವಲಯದಲ್ಲಿ ಇರಿಸಲಾಗಿದೆ.

ಕೇರಳ: ದಿಲ್ಲಿ ಸಮಾವೇಶಕ್ಕೆ ಕೇರಳದಲ್ಲಿರುವ ತಬ್ಲೀ ಸಂಘಟನೆಯ 310 ಕಾರ್ಯಕರ್ತರು ತೆರಳಿದ್ದರು. ಇವರಲ್ಲಿ 160 ಕಾರ್ಯಕರ್ತರು ಕೇರಳಕ್ಕೆ ಹಿಂದಿರುಗಿದ್ದಾರೆ. ಇವರು ಮಲಪ್ಪುರಂ ಹಾಗೂ ಕಣ್ಣೂರು ಜಿಲ್ಲೆಗೆ ಸೇರಿದವರು. ಹಿಂದಿರುಗಿದ ಮೇಲೆ ಅವರೆಲ್ಲರೂ ಸ್ವಯಂ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಇನ್ನುಳಿದ, 150 ಕಾರ್ಯಕರ್ತರ ತಂಡ ದಿಲ್ಲಿಯಲ್ಲೇ ಉಳಿದಿದೆ.

ಸಮಾವೇಶದಲ್ಲಿ ಪಾರ್ಥನೆ ಸಲ್ಲಿಸುತ್ತಿದ್ದಾಗಲೇ ಕೇರಳದ ವೈದ್ಯ ಡಾ. ಸಲೀಂ ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಕೋವಿಡ್ 19 ವೈರಸ್ ಸೋಂಕಿಗೆ ತುತ್ತಾಗಿರುವ ಬಗ್ಗೆ ಗುಮಾನಿ ಇದ್ದು ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.

ಸಮಾವೇಶದ ಅನಂತರ ಕೇರಳಕ್ಕೆ ಹಿಂದಿರುಗಬೇಕಿದ್ದ ಕೆಲವರು, ದೇಶದ ಹಲವು ಕಡೆ ಚದುರಿ ಹೋಗಿದ್ದು, ನಾನಾ ರಾಜ್ಯಗಳ ಮಸೀದಿಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಈಗಾಗಲೇ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಅಬ್ದುಲ್ಲಾ ಮಸೀದಿಯಲ್ಲಿ ಒಬ್ಬ ಕೇರಳಿಗ ಇರುವುದು ಪತ್ತೆಯಾಗಿದೆ. ಆತನನ್ನು ಅಲ್ಲಿಯೇ ಪರೀಕ್ಷೆಗೊಳಪಡಿಸಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.

ತಮಿಳುನಾಡು: ನಿಜಾಮುದ್ದೀನ್‌ ಸಮಾವೇಶಕ್ಕೆ ಹೋಗಿದ್ದ ತಮಿಳುನಾಡಿನ 15 ಜಿಲ್ಲೆಗಳ ಜನರಲ್ಲಿ 110 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆ ರಾಜ್ಯದಿಂದ 1,500 ಜನರು ಸಮಾವೇಶಕ್ಕೆ ಹೋಗಿದ್ದರು. ಅವರಲ್ಲಿ 1,131 ಜನರು ಮಾತ್ರ ರಾಜ್ಯಕ್ಕೆ ಹಿಂದಿರುಗಿದ್ದಾರೆ. ಉಳಿದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸರಕಾರ ಹೇಳಿದೆ.

ತೆಲಂಗಾಣ: ರಾಜ್ಯದ 29 ಜಿಲ್ಲೆಗಳಿಂದ ನಿಜಾಮುದ್ದೀನ್‌ ಸಮಾವೇಶಕ್ಕೆ ಹೋಗಿದ್ದ ಸುಮಾರು 1,000 ಮಂದಿಯಲ್ಲಿ ಹಲವರನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಅವರನ್ನು ಆದಿಲಾಬಾದ್‌, ಕುಮ್ರಮ್‌ ಭೀಮ್‌, ಆಸಿಫಾಬಾದ್‌, ಮಂಕೇರಿ ಯಲ್‌ ಹಾಗೂ ನಿರ್ಮಲಾ ಜಿಲ್ಲೆಗಳವರು ಎಂದು ಗುರುತು ಮಾಡಲಾಗಿದ್ದು, ಅವರೆಲ್ಲರನ್ನೂ ಆಯಾ ಜಿಲ್ಲೆಗಳಲ್ಲಿರುವ ಐಸೋಲೇಷನ್‌ ಕೇಂದ್ರಗಳಿಗೆ ರವಾನಿಸಲಾಗಿದೆ.

ಆಂಧ್ರಪ್ರದೇಶ: ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗಿಯಾಗಿದ್ದ ಆಂಧ್ರಪ್ರದೇಶದ 500 ಜನರ ಬಗ್ಗೆ ಅಲ್ಲಿನ ಸರಕಾರ ಮಾಹಿತಿ ಕಲೆಹಾಕಿದ್ದು, ಅವರ ಪತ್ತೆಗಾಗಿ ಬಲೆ ಬೀಸಿದೆ.

ಪುದುಚೇರಿ: ನಿಜಾಮುದ್ದೀನ್‌ ಸಮಾವೇಶಕ್ಕೆ ಹೋಗಿದ್ದ ಪುದುಚ್ಚೇರಿಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಅವರನ್ನು ಪುದುಚ್ಚೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆಯ ನಿರ್ದೇಶಕ ಮೋಹನ್‌ ಕುಮಾರ್‌ ತಿಳಿಸಿದ್ದಾರೆ.

ಉತ್ತರ ಭಾರತದಲ್ಲೂ ತಬ್ಲೀ ಕಂಪನ
ನಿಜಾಮುದ್ದೀನ್‌ ಸಮಾವೇಶಕ್ಕೆ ಹಾಜರಾಗಿದ್ದ 24 ದಿಲ್ಲಿ ನಾಗರಿಕರಲ್ಲಿ ಸೋಂಕು ದೃಢಪಟ್ಟಿದೆ. ಈ ನಡುವೆ, ದಿಲ್ಲಿಯ ನಿಜಾಮುದ್ದೀನ್‌ನಲ್ಲಿರುವ ಇಸ್ಲಾಂ ಧರ್ಮ ಜಾಗೃತಿ  ಸಂಘಟನೆಯಾದ ತಬ್ಲೀ -ಎ-ಜಮಾತ್‌ನ ಕೇಂದ್ರ ಕಚೇರಿಯಾದ ‘ಮರ್ಕಜ್‌’ನಲ್ಲಿ ಉಳಿದುಕೊಂಡಿದ್ದ 2,361 ಜನರನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಇವರಲ್ಲಿ 617 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಲಕ್ನೋನಿಂದ ನಿಜಾಮುದ್ದೀನ್‌ ಸಮಾ ವೇಶಕ್ಕೆ ತೆರಳಿ, ಆಅನಂತರ ಮನೆಗೆ ಹಿಂದಿರುಗದ 18 ಜನರ ಪತ್ತೆ ಬಲೆ ಬೀಸಲಾಗಿದೆ. ಈ ನಡುವೆ, ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗಿಯಾಗಿ ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ತೆರಳಿದ್ದ 7 ಇಂಡೋನೇಷ್ಯಾ ಪ್ರಜೆಗಳನ್ನು ಪ್ರಯಾಗ್‌ರಾಜ್‌ನ ಅಬ್ದುಲ್ಲಾ ಮಸೀದಿಯಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ.

ಅಸ್ಸಾಂನಿಂದ ನಿಜಾಮುದ್ದೀನ್‌ ಸಮಾವೇಶಕ್ಕೆ ಹೋಗಿದ್ದವರಲ್ಲಿ ಒಬ್ಬರು ಕೋವಿಡ್ 19 ವೈರಸ್ ಸೋಂಕಿನಿಂದ ಬುಧವಾರ ನಿಧನರಾಗಿದ್ದಾರೆ. ಸಮಾವೇಶದಲ್ಲಿ ಭಾಗಿಯಾಗಿ ಹಿಂದಿರುಗಿದ್ದ ಜಮ್ಮುವಿನ 10 ಜನರನ್ನು ಪ್ರತ್ಯೇಗ ನಿಗಾದಲ್ಲಿ ಇರಿಸಲಾಗಿದೆ. ಅಲ್ಲಿಂದ ಹಿಂದಿರುಗಿದವರು ಇರುವ ಕಾಶ್ಮೀರದ 8 ಹಳ್ಳಿಗಳನ್ನು ಗುರುತು ಹಾಕಿ ಅವುಗಳನ್ನು ಕೆಂಪು ವಲಯಗಳೆಂದು ಹೆಸರಿಸಲಾಗಿದೆ.

ಸಮಾವೇಶಕ್ಕೆ ಹೋಗಿ ಬಂದಿರುವ ಬಿಹಾರದ 81 ಮಂದಿಯ ಪಟ್ಟಿಯ ಅಲ್ಲಿ ರಾಜ್ಯ ಸರಕಾರಕ್ಕೆ ಲಭ್ಯವಾಗಿದೆ. ರಾಜಸ್ಥಾನದ 1,500ಕ್ಕೂ ಹೆಚ್ಚು ಜನರಲ್ಲಿ 24 ಜನರಿಗೆ ಕೊರೊನಾ ಸೋಂಕು ಹರಡಿರುವುದು ಪತ್ತೆಯಾಗಿದೆ. 441 ಜನರಲ್ಲಿ ಸೋಂಕು ಇರುವ ಶಂಕೆಯಿದೆ. ಮಹಾರಾಷ್ಟ್ರದಿಂದ ಸಮಾವೇಶಕ್ಕೆ ತೆರಳಿದ್ದ 252 ಮಂದಿಯ ಪಟ್ಟಿ ಲಭ್ಯವಾಗಿದ್ದು ಅವರ ಹುಡುಕಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಸಮಾವೇಶದಿಂದ ಸೋಂಕು ಮತ್ತಷ್ಟು ಏರಿಕೆ
ಹೊಸದಿಲ್ಲಿಯಲ್ಲಿ ಕಳೆದ ತಿಂಗಳು ಜರುಗಿದ ತಬ್ಲೀ – ಎ-ಜಮಾತ್‌ನ ಸಮಾವೇಶದ ಅನಂತರ ದೇಶದಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ 1,637ಕ್ಕೇರಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಮಂಗಳವಾರ-ಬುಧವಾರದ ಅವಧಿಯಲ್ಲಿ 386 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಿಜಾಮುದ್ದೀನ್‌ ಸಮಾವೇಶದಿಂದ ಆಗಮಿಸಿರುವ‌ 1,800 ಜನರನ್ನು ಪತ್ತೆ ಹಚ್ಚಲಾಗಿದ್ದು, ಅವರೆಲ್ಲರನ್ನೂ ವಿವಿಧ ಆಸ್ಪತ್ರೆಗಳಲ್ಲಿ ನಿಗಾ ವಲಯದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರೈಲ್ವೆ ಇಲಾಖೆಯು 3.2 ಲಕ್ಷ ಹಾಸಿಗೆ ಸಾಮರ್ಥ್ಯದ ಐಸೋಲೇಷನ್‌ ಹಾಗೂ ಕ್ವಾರಂಟೈನ್‌ ಬೋಗಿಗಳನ್ನು ತಯಾರಿಸುತ್ತಿದೆ ಅಗರ್ವಾಲ್‌ ಹೇಳಿದ್ದಾರೆ. ವಲಸೆ ಕಾರ್ಮಿಕರಿಗಾಗಿ ದೇಶಾದ್ಯಂತ 21,486 ಪರಿಹಾರ ಕ್ಯಾಂಪ್‌ಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 6,75,133 ಜನರು ಆಶ್ರಯ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಐದು ರೈಲುಗಳ ಪ್ರಯಾಣಿಕರ ಹುಡುಕಾಟ
ನಿಜಾಮುದ್ದೀನ್‌ ಸಮಾವೇಶದಿಂದ ವಿವಿಧ ರಾಜ್ಯಗಳಿಗೆ ಹಿಂದಿರುಗಿದವರು ಪ್ರಯಾಣಿಸಿರುವ ಪ್ರಮುಖ ಐದು ರೈಲುಗಳಲ್ಲಿ ಇದ್ದ ಪ್ರಯಾಣಿಕರ ಶೋಧಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ.

ಮಾ. 13ರಿಂದ 19ರೊಳಗೆ, ದಿಲ್ಲಿಯಿಂದ ಪ್ರಯಾಣಿಸಿದ್ದ ಡುರೊಂಟೊ ಎಕ್ಸ್‌ಪ್ರೆಸ್‌ (ಆಂಧ್ರದ ಗುಂಟೂರು ಕಡೆಗೆ), ಗ್ರಾಂಡ್‌ಟ್ರಂಕ್‌ ಎಕ್ಸ್‌ಪ್ರೆಸ್‌ (ಚೆನ್ನೈ ಕಡೆಗೆ), ರಾಜಧಾನಿ ಎಕ್ಸ್‌ಪ್ರೆಸ್‌ (ರಾಂಚಿ ಕಡೆಗೆ) ಹಾಗೂ ಎ.ಪಿ. ಸಂಪರ್ಕ್‌ ಕ್ರಾಂತಿ ಎಕ್ಸ್‌ಪ್ರೆಸ್‌ (ಆಂಧ್ರದ ಕಡೆಗೆ) ರೈಲುಗಳ ಪ್ರಯಾಣಿಕರ ಪಟ್ಟಿಯನ್ನು ಜಾಲಾಡಲಾಗುತ್ತಿದೆ.

ಅಜಿತ್‌ ದೋವಲ್‌ ಸಹಾಯ
ತಬ್ಲೀ ಯ ಕೇಂದ್ರ ಕಚೇರಿಗೆ ಹೊಂದಿಕೊಂಡಂತಿರುವ ಬಂಗ್ಲೇವಾಲಾ ಮಸೀದಿಯಲ್ಲೂ ಸಮಾವೇಶಕ್ಕೆ ಬಂದಿದ್ದವರು ಹಾಗೂ ತಬ್ಲೀ ಕಾರ್ಯಕರ್ತರು ಇರುವುದು ಮಾ. 28ರಂದೇ ದಿಲ್ಲಿ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಮಾಹಿತಿ ಲಭಿಸಿತ್ತು.

ಮಸೀದಿ ಪ್ರವೇಶಿಸಿ ಅವರೆಲ್ಲರನ್ನೂ ಅಲ್ಲಿಂದ ತೆರವುಗೊಳಿಸುವುದಕ್ಕೆ ಮಸೀದಿಯ ಮೌಲಾ ಆದ ಮೌಲಾನಾ ಸಾದ್‌ ಅವಕಾಶ ಕೊಟ್ಟಿರಲಿಲ್ಲ. ಆಗ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪ್ರಧಾನಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರಿಗೆ ಕರೆ ಮಾಡಿ, ಮೌಲಾರ ಮನವೊಲಿಸಿದರು. ಅದಾದ ಅನಂತರವಷ್ಟೇ ತೆರವು ಕಾರ್ಯಾಚರಣೆ ಹಾದಿ ಸುಗಮವಾಯಿತು.

ಇಂದು ಸಿಎಂಗಳೊಂದಿಗೆ ಮಾತುಕತೆ
ಪ್ರಧಾನಿ ನರೇಂದ್ರ ಮೋದಿ ಗುರುವಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಲಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಮಾತುಕತೆ ಮಹತ್ವ ಪಡೆದಿದೆ. ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತದ ಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಇದೇ ವೇಳೆ, ಬುಧವಾರ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಅವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಟಾಪ್ ನ್ಯೂಸ್

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

1-wwewqe

Lok Sabha ಅಖಾಡಕ್ಕೆ ಲಾಲು ಪ್ರಸಾದ್‌ ಪುತ್ರಿ ಡಾ| ರೋಹಿಣಿ ಹೆಜ್ಜೆ

RBI

Cyber ​​attack: ಭದ್ರತೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

K-Kavitha

ED; ದಿಲ್ಲಿ ಲಿಕ್ಕರ್‌ ಕೇಸ್‌ ಡೀಲ್‌ಗೆ ಕೆಸಿಆರ್‌ ಪುತ್ರಿ ಕವಿತಾ ಸಂಚು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.