ಚಿದಂಬರಂಗೆ ಜಾಮೀನು ಬೇಡವೇ ಬೇಡ: ಸಿಬಿಐ
Team Udayavani, Sep 21, 2019, 4:30 AM IST
ಹೊಸದಿಲ್ಲಿ: ಐಎನ್ಎಕ್ಸ್ ಪ್ರಕರಣದಲ್ಲಿ ಮಾಜಿ ಸಚಿವ ಪಿ. ಚಿದಂಬರಂಗೆ ಜಾಮೀನು ಕೊಡಲೇಬಾರದು ಎಂದು ಸಿಬಿಐ ದಿಲ್ಲಿ ಹೈಕೋರ್ಟ್ ನಲ್ಲಿ ಒತ್ತಾಯಿಸಿದೆ. ಇದೊಂದು ಅತ್ಯಂತ ಗಂಭೀರ ಆರ್ಥಿಕ ಅಪರಾಧವಾಗಿದೆ. ಹೀಗಾಗಿ, ಅವ ರಿಗೆ ಜಾಮೀನು ನೀಡಿದರೆ ತನಿ ಖೆಯ ಮೇಲೆ ಪ್ರಭಾವ ಬೀರಲಿದೆ ಎಂದು ಹೈಕೋರ್ಟ್ಗೆ ಅರಿಕೆ ಮಾಡಿದೆ. ಇದೊಂದು ಸಾರ್ವ ಜನಿಕ ನಂಬಿಕೆ ಮೇಲೆ ಬರೆ ಎಳೆದ ಪ್ರಕರಣ ಇದಾಗಿದೆ ಎಂದಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳು ಕೇವಲ ದುರುದ್ದೇಶದಿಂದ ಕೂಡಿದೆ. ಜತೆಗೆ ರಾಜಕೀಯ ಪ್ರತೀಕಾರ ತೀರಿಸುವ ಉದ್ದೇಶದ್ದಾಗಿದೆ ಎಂದು ಚಿದು ತಮ್ಮ ಜಾಮೀನು ಅರ್ಜಿಯಲ್ಲಿ ವಾದಿಸಿದ್ದಾರೆ.
ಐಎನ್ಎಕ್ಸ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಆ. 23ರಂದು ಹೊಸದಿಲ್ಲಿಯಲ್ಲಿ ಸಿಬಿಐ ಬಂಧಿಸಿತ್ತು. ಸದ್ಯ ಅವರನ್ನು ಅ. 3ರ ವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ವಿಶೇಷ ಕೋರ್ಟ್ ಈಗಾಗಲೇ ಆದೇಶ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್