ಮುಂಬಯಿಯಲ್ಲಿ ಹೊಸ ಡ್ಯಾನ್ಸ್‌ ಬಾರ್‌ಗಳಿಗೆ ನೋ ಚಾನ್ಸ್‌ !


Team Udayavani, Oct 26, 2017, 11:29 AM IST

6.jpg

ಮುಂಬಯಿ: ನಗರದಲ್ಲಿ  ಸದ್ಯ ಯಾವುದೇ ಡ್ಯಾನ್ಸ್‌ ಬಾರ್‌ಗಳು  ಕಾರ್ಯಾರಂಭ ಮಾಡುವ ಸಾಧ್ಯತೆ ದೂರವಾಗಿದೆ. 2016ರ ನವೆಂಬರ್‌ನಲ್ಲಿ  ಸುಪ್ರೀಂ ಕೋರ್ಟ್‌  ನೀಡಿದ  ಆದೇಶದಂತೆ  ಡ್ಯಾನ್ಸ್‌ ಬಾರ್‌ಗಳನ್ನು ತೆರೆಯಲು ಲೈಸೆನ್ಸ್‌  ಕೋರಿ  ಹೊಸದಾಗಿ ಸಲ್ಲಿಸಲಾಗಿದ್ದ  ಎಲ್ಲಾ  79 ಅರ್ಜಿಗಳನ್ನೂ  ಮುಂಬಯಿ  ಪೊಲೀಸರು  ತಿರಸ್ಕರಿಸಿದ್ದಾರೆ.  ಪೊಲೀಸರ ಈ ನಿರ್ಧಾರದಿಂದ ನಗರದ  ನಾಗರಿಕರು  ನಿಟ್ಟುಸಿರು ಬಿಡುವಂತಾಗಿದ್ದರೆ  ಬಾರ್‌  ಮಾಲಕರು  ಮಾತ್ರ  ತೀವ್ರ ಹಿನ್ನಡೆಯನ್ನು  ಕಾಣುವಂತಾಗಿದೆ. 

ರಾಜ್ಯದಲ್ಲಿ  ಡ್ಯಾನ್ಸ್‌ ಬಾರ್‌ಗಳು  ಪುನರಾರಂಭಗೊಳ್ಳಲು ಅವಕಾಶ  ನೀಡದಿರುವ  ಕ್ರಮವಾಗಿ  ರಾಜ್ಯ ಸರಕಾರ  ರೂಪಿಸಿದ್ದ  ನಿಯಮಾವಳಿಯನ್ನು  ಪ್ರಶ್ನಿಸಿ  ಸಲ್ಲಿಸಲಾಗಿರುವ  ಅರ್ಜಿಯ ವಿಚಾರಣೆಯನ್ನು  ಮುಂದಿನ  ಜನವರಿವರೆಗೆ  ಮುಂದೂಡಲಾಗಿರುವುದರಿಂದ  ಸದ್ಯಕ್ಕಂತೂ ನಗರದಲ್ಲಿ  ಮತ್ತೆ  ಡ್ಯಾನ್ಸ್‌ ಬಾರ್‌ಗಳು  ತಲೆಎತ್ತುವ ಸಾಧ್ಯತೆಗಳು  ದೂರವಾಗಿವೆ. ಡ್ಯಾನ್ಸ್‌ ಬಾರ್‌  ಅಸೋಸಿಯೇಶನ್‌  ರಾಜ್ಯ ಸರಕಾರ  ರೂಪಿಸಿರುವ  ಕಾನೂನಿಗೆ  ತಡೆ  ನೀಡುವಂತೆ  ಕೋರಿ ಸಲ್ಲಿಸಿರುವ  ಅರ್ಜಿಯ  ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ  ನ್ಯಾಯಾಧೀಶರು  ಇನ್ನೊಂದು  ಪ್ರಮುಖ  ಪ್ರಕರಣದ  ವಿಚಾರಣೆ ನಡೆಸುತ್ತಿರುವ ಪಂಚ ಸದಸ್ಯರ  ಸಾಂವಿಧಾನಿಕ ಪೀಠದ  ಸದಸ್ಯರಾಗಿರುವ  ಹಿನ್ನೆಲೆಯಲ್ಲಿ  ಡ್ಯಾನ್ಸ್‌ ಬಾರ್‌ ಮಾಲಕರ ಅರ್ಜಿಯ  ವಿಚಾರಣೆಯನ್ನು ಸದ್ಯಕ್ಕೆ  ಮುಂದೂಡಲಾಗಿದೆ ಎಂದು  ಬಾರ್‌ ಮಾಲಕರ  ಪರ ವಕೀಲರಾದ ಸತ್ಯಜಿತ್‌ ಸಾಹಾ ತಿಳಿಸಿದರು. 

ಷರತ್ತುಗಳ ಈಡೇರಿಕೆಯಲ್ಲಿ ಅರ್ಜಿದಾರರು ವಿಫ‌ಲ
2016ರ  ನ. 24ರಂದು  ಸುಪ್ರೀಂ ಕೋರ್ಟ್‌ ನೀಡಿದ್ದ  ಆದೇಶದಲ್ಲಿ   ಈಗಾಗಲೇ  ನಗರದಲ್ಲಿ  ಲೈಸೆನ್ಸ್‌  ನೀಡಲಾಗಿರುವ  ಮೂರು ಡ್ಯಾನ್ಸ್‌ ಬಾರ್‌ಗಳ ಮಾದರಿಯಲ್ಲಿ  ನಿಯಮಾವಳಿಗಳನ್ನು  ಪಾಲಿಸುವ  ಭರವಸೆ  ನೀಡುವ  ಬಾರ್‌ಗಳ ಮಾಲಕರು  ಲೈಸೆನ್ಸ್‌ಗಾಗಿ  ಅರ್ಜಿ ಸಲ್ಲಿಸಿದಲ್ಲಿ  ಅದನ್ನು  ಪರಿಗಣಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಿತ್ತು. ಅದರಂತೆ  ಜುಲೈವರೆಗೆ  ನಗರ  ಪೊಲೀಸರಿಗೆ  79 ಅರ್ಜಿಗಳು  ಸಲ್ಲಿಕೆಯಾಗಿದ್ದವು. ಆದರೆ  ಸ್ಥಳೀಯ  ಪ್ರದೇಶಗಳ  ಠಾಣೆಗಳ  ಪೊಲೀಸರು  ನಕಾರಾತ್ಮಕ  ವರದಿಯನ್ನು ಸಲ್ಲಿಸಿದ  ಹಿನ್ನೆಲೆಯಲ್ಲಿ ಮತ್ತು ನ್ಯಾಯಾಲಯದಿಂದ  ಅಂಗೀಕರಿಸಲ್ಪಟ್ಟ  26 ಷರತ್ತುಗಳನ್ನು  ಈಡೇರಿಸುವಲ್ಲಿ ಅರ್ಜಿದಾರರು  ವಿಫ‌ಲವಾದ್ದರಿಂದ  ಈ ಅರ್ಜಿ ತಿರಸ್ಕರಿಸ ಲಾಗಿದೆ ಎಂದು  ಪೊಲೀಸ್‌ ಅಧಿಕಾರಿ ತಿಳಿಸಿದರು. 

ಬಾರ್‌ ಮಾಲಕರ ಅಸಮಾಧಾನ
ಆದರೆ  ಮುಂಬಯಿ  ಪೊಲೀಸರ  ಈ ನಿರ್ಧಾರಕ್ಕೆ  ತೀವ್ರ ಅಸಮಾಧಾನ ವ್ಯಕ್ತಪಡಿಸಿ ರುವ  ಬಾರ್‌ ಮಾಲಕರು  ಪೊಲೀಸರು  ಡ್ಯಾನ್ಸ್‌ ಬಾರ್‌ಗಳಿಗೆ  ಲೈಸೆನ್ಸ್‌  ನೀಡಲು  ನಿರಾಸಕ್ತಿಯನ್ನು  ತಾಳಿರುವುದರಿಂದ  ಸಕಾರಣಗಳಿಲ್ಲದೇ  ನಮ್ಮ  ಅರ್ಜಿಗಳನ್ನು  ತಿರಸ್ಕರಿಸಿದ್ದಾರೆ ಎಂದು ದೂರಿದ್ದಾರೆ. ಲೈಸೆನ್ಸ್‌  ನೀಡಿಕೆ  ಪ್ರಕ್ರಿಯೆಯಲ್ಲಿ  ಪಾರದರ್ಶಕತೆಯನ್ನು  ಕಾಯ್ದುಕೊಳ್ಳಲು  ಬಾರ್‌ ಆವರಣಗಳ  ಪರಿಶೀಲನೆಗಾಗಿ  ನ್ಯಾಯಾಲಯದಿಂದ  ಸ್ವತಂತ್ರ  ಮಂಡಳಿಯೊಂದನ್ನು  ನೇಮಕ ಮಾಡಬೇಕು ಎಂದು  ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.