ಮುಂಬಯಿಯಲ್ಲಿ ಹೊಸ ಡ್ಯಾನ್ಸ್ ಬಾರ್ಗಳಿಗೆ ನೋ ಚಾನ್ಸ್ !
Team Udayavani, Oct 26, 2017, 11:29 AM IST
ಮುಂಬಯಿ: ನಗರದಲ್ಲಿ ಸದ್ಯ ಯಾವುದೇ ಡ್ಯಾನ್ಸ್ ಬಾರ್ಗಳು ಕಾರ್ಯಾರಂಭ ಮಾಡುವ ಸಾಧ್ಯತೆ ದೂರವಾಗಿದೆ. 2016ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ಡ್ಯಾನ್ಸ್ ಬಾರ್ಗಳನ್ನು ತೆರೆಯಲು ಲೈಸೆನ್ಸ್ ಕೋರಿ ಹೊಸದಾಗಿ ಸಲ್ಲಿಸಲಾಗಿದ್ದ ಎಲ್ಲಾ 79 ಅರ್ಜಿಗಳನ್ನೂ ಮುಂಬಯಿ ಪೊಲೀಸರು ತಿರಸ್ಕರಿಸಿದ್ದಾರೆ. ಪೊಲೀಸರ ಈ ನಿರ್ಧಾರದಿಂದ ನಗರದ ನಾಗರಿಕರು ನಿಟ್ಟುಸಿರು ಬಿಡುವಂತಾಗಿದ್ದರೆ ಬಾರ್ ಮಾಲಕರು ಮಾತ್ರ ತೀವ್ರ ಹಿನ್ನಡೆಯನ್ನು ಕಾಣುವಂತಾಗಿದೆ.
ರಾಜ್ಯದಲ್ಲಿ ಡ್ಯಾನ್ಸ್ ಬಾರ್ಗಳು ಪುನರಾರಂಭಗೊಳ್ಳಲು ಅವಕಾಶ ನೀಡದಿರುವ ಕ್ರಮವಾಗಿ ರಾಜ್ಯ ಸರಕಾರ ರೂಪಿಸಿದ್ದ ನಿಯಮಾವಳಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮುಂದಿನ ಜನವರಿವರೆಗೆ ಮುಂದೂಡಲಾಗಿರುವುದರಿಂದ ಸದ್ಯಕ್ಕಂತೂ ನಗರದಲ್ಲಿ ಮತ್ತೆ ಡ್ಯಾನ್ಸ್ ಬಾರ್ಗಳು ತಲೆಎತ್ತುವ ಸಾಧ್ಯತೆಗಳು ದೂರವಾಗಿವೆ. ಡ್ಯಾನ್ಸ್ ಬಾರ್ ಅಸೋಸಿಯೇಶನ್ ರಾಜ್ಯ ಸರಕಾರ ರೂಪಿಸಿರುವ ಕಾನೂನಿಗೆ ತಡೆ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು ಇನ್ನೊಂದು ಪ್ರಮುಖ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಂಚ ಸದಸ್ಯರ ಸಾಂವಿಧಾನಿಕ ಪೀಠದ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಡ್ಯಾನ್ಸ್ ಬಾರ್ ಮಾಲಕರ ಅರ್ಜಿಯ ವಿಚಾರಣೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಬಾರ್ ಮಾಲಕರ ಪರ ವಕೀಲರಾದ ಸತ್ಯಜಿತ್ ಸಾಹಾ ತಿಳಿಸಿದರು.
ಷರತ್ತುಗಳ ಈಡೇರಿಕೆಯಲ್ಲಿ ಅರ್ಜಿದಾರರು ವಿಫಲ
2016ರ ನ. 24ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಲ್ಲಿ ಈಗಾಗಲೇ ನಗರದಲ್ಲಿ ಲೈಸೆನ್ಸ್ ನೀಡಲಾಗಿರುವ ಮೂರು ಡ್ಯಾನ್ಸ್ ಬಾರ್ಗಳ ಮಾದರಿಯಲ್ಲಿ ನಿಯಮಾವಳಿಗಳನ್ನು ಪಾಲಿಸುವ ಭರವಸೆ ನೀಡುವ ಬಾರ್ಗಳ ಮಾಲಕರು ಲೈಸೆನ್ಸ್ಗಾಗಿ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಪರಿಗಣಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಿತ್ತು. ಅದರಂತೆ ಜುಲೈವರೆಗೆ ನಗರ ಪೊಲೀಸರಿಗೆ 79 ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಸ್ಥಳೀಯ ಪ್ರದೇಶಗಳ ಠಾಣೆಗಳ ಪೊಲೀಸರು ನಕಾರಾತ್ಮಕ ವರದಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಮತ್ತು ನ್ಯಾಯಾಲಯದಿಂದ ಅಂಗೀಕರಿಸಲ್ಪಟ್ಟ 26 ಷರತ್ತುಗಳನ್ನು ಈಡೇರಿಸುವಲ್ಲಿ ಅರ್ಜಿದಾರರು ವಿಫಲವಾದ್ದರಿಂದ ಈ ಅರ್ಜಿ ತಿರಸ್ಕರಿಸ ಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಬಾರ್ ಮಾಲಕರ ಅಸಮಾಧಾನ
ಆದರೆ ಮುಂಬಯಿ ಪೊಲೀಸರ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ರುವ ಬಾರ್ ಮಾಲಕರು ಪೊಲೀಸರು ಡ್ಯಾನ್ಸ್ ಬಾರ್ಗಳಿಗೆ ಲೈಸೆನ್ಸ್ ನೀಡಲು ನಿರಾಸಕ್ತಿಯನ್ನು ತಾಳಿರುವುದರಿಂದ ಸಕಾರಣಗಳಿಲ್ಲದೇ ನಮ್ಮ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಎಂದು ದೂರಿದ್ದಾರೆ. ಲೈಸೆನ್ಸ್ ನೀಡಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಬಾರ್ ಆವರಣಗಳ ಪರಿಶೀಲನೆಗಾಗಿ ನ್ಯಾಯಾಲಯದಿಂದ ಸ್ವತಂತ್ರ ಮಂಡಳಿಯೊಂದನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ