ವೃಂದಾವನ,ಬಾರಸಾನಾ ಪುಣ್ಯಕ್ಷೇತ್ರ; ಮದ್ಯ, ಮಾಂಸ, ಮೊಟ್ಟೆ ನಿಷೇಧ
Team Udayavani, Oct 28, 2017, 12:07 PM IST
ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವೃಂದಾವನ ಮತ್ತು ಬಾರ್ಸಾನಾ ವನ್ನು ಪವಿತ್ರ ತೀರ್ಥ ಕ್ಷೇತ್ರಗಳೆಂದು ಘೋಷಿಸಿದ್ದಾರೆ. ಇದರೆ ಇದರೊಂದಿಗೆ ಒಂದು ಕಟ್ಟಪ್ಪಣೆಯನ್ನೂ ಮಾಡಿದ್ದಾರೆ. ಅದೆಂದರೆ ಈ ಎರಡೂ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಮೊಟ್ಟೆ, ಮಾಂಸಾಹಾರ ಮತ್ತು ಮದ್ಯ ಸೇವನೆಯನ್ನು ನಿಷೇಧಿಸಲಾಗಿದೆ !
ನವೆಂಬರ್ 22ರಿಂದ ಮೂರು ಹಂತಗಳಲ್ಲಿ ನಡೆಯಲಿರುವ ಪೌರಾಡಳಿತ ಸಂಸ್ಥೆಗಳ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ನಿರ್ಧಾರ ತಳೆದಿರುವುದು ಅಚ್ಚರಿ ಉಂಟುಮಾಡಿದೆ.
ಉತ್ತರ ಪ್ರದೇಶ ಸರಕಾರ ಈ ಸಂಬಂಧ ಹೊರಡಿಸಿರುವ ಅಧಿಕೃತ ಪ್ರಕಟನೆ ಹೀಗೆ ಹೇಳುತ್ತದೆ :
ಮಥುರಾದಲ್ಲಿನ ವೃಂದಾವನ ಶ್ರೀಕೃಷ್ಣನ ಹಾಗೂ ಆತನ ಅಣ್ಣ ಬಲರಾಮನ ಜನ್ಮ ಸ್ಥಳ. ಅಂತೆಯೇ ಇದು ವಿಶ್ವ ಪ್ರಸಿದ್ಧ ಪ್ರವಾಸೀ ತಾಣ. ಬಾರಸಾನಾ ರಾಧೆಯ ಜನ್ಮಸ್ಥಳ. ಲಕ್ಷಾಂತರ ಪ್ರವಾಸಿಗರು ಈ ಕ್ಷೇತ್ರವನ್ನು ಸಂದರ್ಶಿಸುತ್ತಾರೆ. ಈ ಎರಡು ಪುಣ್ಯ ಕ್ಷೇತ್ರಗಳ ಮಹತ್ವವನ್ನು ಹಾಗೂ ಪ್ರವಾಸಿಗರನ್ನು ದೃಷ್ಟಿಯಲ್ಲಿರಿಸಿಕೊಂಡು ಇವುಗಳನ್ನು ಪವಿತ್ರ ತೀರ್ಥ ಕ್ಷೇತ್ರಗಳೆಂದು ಘೋಷಿಸಲಾಗಿದೆ.
ವೃಂದಾವನ ಮತ್ತು ಬಾರಸಾನ ಪುಣ್ಯ ಕ್ಷೇತ್ರಗಳಲ್ಲಿ ಒಳ ಚರಂಡಿ ನಿರ್ಮಾಣ ಮತ್ತು ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಾಣಕ್ಕೆಂದು ಕೇಂದ್ರ ಸರಕಾರ ಈಚೆಗೆ 350 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ಮಥುರಾದಿಂದ 11 ಕಿ.ಮೀ. ದೂರ ಇರುವ ವೃಂದಾವನದಲ್ಲಿ ಸುಮಾರು 5,000 ದೇವಸ್ಥಾನಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ