ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿ, ಲಾಕ್ ಡೌನ್ ಇಲ್ಲವೇ ಇಲ್ಲ : ಕೇಜ್ರಿವಾಲ್
Team Udayavani, Apr 10, 2021, 4:32 PM IST
ನವ ದೆಹಲಿ : ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡುಬಂದರೂ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಲಾಕ್ ಡೌನ್ ವಿಧಿಸಲಾಗುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ(ಏ.10) ಹೇಳಿದ್ದಾರೆ.
ಕೋವಿಡ್ ಸೋಂಕನ್ನುನಿಯಂತ್ರಣಕ್ಕೆ ತರುವ ಉದ್ದೇಶದಿಂದ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ಅತಿ ಶೀಘ್ರದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.
ಓದಿ : ತೃಣಮೂಲ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿದೆ : ಮೋದಿ ಕಿಡಿ
ನಮ್ಮಲ್ಲಿ ಸಾಕಷ್ಟು ಕೋವಿಡ್ ಲಸಿಕೆಗಳು ಇದ್ದಿದ್ದರೇ ಹಾಗೂ ಯಾವುದೇ ವಯೋಮಿತಿ ಇಲ್ಲದಿದ್ದರೇ, ಎರಡರಿಂದ ಮೂರು ತಿಂಗಳುಗಳಲ್ಲಿ ದೆಹಲಿಯ ಎಲ್ಲಾ ನಾಗರಿಕರಿಗೆ ಕೋವಿಡ್ ಲಸಿಕೆಯನ್ನು ನೀಡಬಹುದಿತ್ತು. ಸದ್ಯಕ್ಕೆ ನಮ್ಮಲ್ಲಿ ಒಂದು ವಾರಕ್ಕೆ ಪೂರೈಸುವಷ್ಟು ಮಾತ್ರ ಲಸಿಕೆಗಳ ಲಭ್ಯವಿದೆ. ಲಸಿಕೆಯನ್ನು ನೀಡುವುದಕ್ಕೆ ವಯೋಮಿತಿಯನ್ನು ತೆಗೆಯಬೇಕಿದೆ. ಲಸಿಕೆಯನ್ನು ಎಲ್ಲರಿಗೂ ನೀಡುವಂತದ್ದು ದೇಶದಲ್ಲಿ ಆಗಬೇಕು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವ ಯೋಜನೆಯೇ ಇಲ್ಲ ಎಂದು ಅವರು ತಿಳಿಸಿದ್ದಾರೆ.
If we have enough doses & age bar is removed, we can vaccinate people within 2-3 months in Delhi. Currently, we’ve vaccine for 7-10 days. We need to remove age criteria & scale up vaccination. There’ll be no lockdown. New restrictions will be imposed soon:Delhi CM Arvind Kejriwal pic.twitter.com/v8YfK1SUks
— ANI (@ANI) April 10, 2021
ಈ ನಡುವೆ ದೆಹಲಿಯಲ್ಲಿ ಸೋಂಕಿನ ಹಠಾತ್ ಏರಿಕೆಯಿಂದಾಗಿ ದೆಹಲಿ ಸರ್ಕಾರ ನಿನ್ನೆ(ಶುಕ್ರವಾರ, ಏ.09) ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನು ಮುಂದಿನ ಆದೇಶ ಹೊರಡುವ ತನಕ ಮುಚ್ಚುವಂತೆ ಆದೇಶಿಸಿತ್ತು.
ರಾಷ್ಟ್ರ ರಾಜಧಾನಿಯಲ್ಲಿ 8,521 ಹೊಸ ಕೋವಿಡ್ ಸೋಂಕುಗಳನ್ನು ವರದಿಯಾಗಿವೆ . ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನ ಕಾರಣದಿಂದಾಘೀ 39 ಸಾವುಗಳು ಸಂಭವಿಸಿವೆ ಎಂದು ದೆಹಲಿ ಸರ್ಕಾರದ ಹೆಲ್ತ್ ಬುಲೆಟಿನ್ ತಿಳಿಸಿದೆ.
ಕಳೆದ ವರ್ಷ ನವೆಂಬರ್ 11 ರಂದು ದೆಹಲಿ ಒಂದು ದಿನದಲ್ಲಿ 8,593 ಸೋಂಕು ಏರಿಕೆ ಕಂಡಿತ್ತು.
ಓದಿ : ಮುಂಬೈ ವಿರುದ್ಧ ರೋಚಕ ಗೆಲುವು: ‘ಪಂಜಾಬ್ ಕಿಂಗ್ಸ್’ ತಂಡಕ್ಕೆ ಥ್ಯಾಂಕ್ಸ್ ಹೇಳಿದ್ದೇಕೆ RCB ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ