ವಾಹನ ನಿಲುಗಡೆಗೆ ಜಾಗವಿಲ್ಲವಾ? ಡಾಬಾಗಳು ಬಂದ್!
ಎನ್ಎಚ್ಎಐನಿಂದ ಹೆದ್ದಾರಿಗಳ ಪಕ್ಕದ ಡಾಬಾ ಮಾಲಿಕರಿಗೆ ಎಚ್ಚರಿಕೆ: ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ
Team Udayavani, Jun 25, 2022, 6:55 AM IST
ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ), ರಾಷ್ಟ್ರೀಯ ಹೆದ್ದಾರಿಗಳ ಆಜುಬಾಜಿನಲ್ಲಿರುವ ಡಾಬಾಗಳಿಗೆ ಕಠಿಣ ಸೂಚನೆ ರವಾನಿಸಿದೆ. ಡಾಬಾಗಳು ವಾಹನ ನಿಲುಗಡೆಗೆ ಜಾಗ ನೀಡದಿದ್ದರೆ, ಅವುಗಳನ್ನು ಮುಚ್ಚಲು ಆದೇಶಿಸಲಾಗುತ್ತದೆ ಎಂದು ತಿಳಿಸಿದೆ.
ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಅವನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಮೊದಲ ಹಂತವಾಗಿ ಲಕ್ನೋ-ಸೀತಾಪುರ, ಕಾನ್ಪುರ-ಫೈಜಾಬಾದ್, ರಾಯ್ಬರೇಲಿ ಹೆದ್ದಾರಿಗಳ ಡಾಬಾ ಮಾಲಿಕರಿಗೆ ನೋಟಿಸ್ಗಳನ್ನು ನೀಡಲಾಗುತ್ತದೆ. ನಂತರ ಉಳಿದ ಪ್ರದೇಶಗಳಿಗೂ ಈ ನೋಟಿಸ್ಗಳನ್ನು ವಿಸ್ತರಣೆ ಮಾಡಲಾಗುತ್ತದೆ. ಡಾಬಾಗಳು ವಾಹನ ನಿಲುಗಡೆಗೆ ಜಾಗ ನೀಡಿವೆಯೇ? ಎರಡು ಢಾಬಾಗಳ ನಡುವೆ ಎಷ್ಟು ಅಂತರವಿದೆ? ಎರಡೂ ಪ್ರತ್ಯೇಕ ಜಾಗವನ್ನೇ ವಾಹನಗಳಿಗೆ ನೀಡಿವೆಯಾ? ಇಬ್ಬನಿ ಬಿದ್ದು ಸ್ಥಳ ಮಸುಕಾಗಿರುವ ಹೊತ್ತಿನಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಿವೆಯಾ? ಎಂಬುದನ್ನೆಲ್ಲ ಗಮನಿಸಲಾಗುತ್ತದೆ.
ಯಾವುದೇ ಕೊರತೆಯಿದ್ದರೂ ಕ್ರಮ ಖಚಿತ! ಅಷ್ಟು ಮಾತ್ರವಲ್ಲ ವಾಹನಗಳನ್ನು ಚಾಲಕರು ಯದ್ವಾತದ್ವಾ ನಿಲ್ಲಿಸಿದ್ದರೂ, ವಾಹನಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಡಾಬಾಗಳಲ್ಲಿ ನಿಲ್ಲಿಸಲು ಜಾಗವಿಲ್ಲದೇ ಬಹುತೇಕ ವಾಹನಗಳನ್ನು ಹೆದ್ದಾರಿಗಳಲ್ಲೇ ನಿಲ್ಲಿಸಲಾಗುತ್ತಿದೆ. ಇದರಿಂದ ಹಲವು ಅಪಘಾತಗಳು ಸಂಭವಿಸಿವೆ ಎಂದು ಎನ್ಎಚ್ಎಐ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ