ಎಂಎಲ್ಎಗಳಿಗೂ ಇರಲಿ ನೋ ವರ್ಕ್; ನೋ ಪೇ
Team Udayavani, Sep 16, 2017, 9:53 AM IST
ಚೆನ್ನೈ: ಕೆಲಸ ಇಲ್ಲದಿದ್ದರೆ ಸಂಬಳ ಇಲ್ಲ (ನೋ ವರ್ಕ್; ನೋ ಪೇ) ಎಂಬ ನಿಯಮ ಸರಕಾರಿ ಉದ್ಯೋಗಿಗಳಿಗೆ ಮಾತ್ರ ಯಾಕೆ? ಶಾಸಕರಿಗೂ ಅದನ್ನು ಅನ್ವಯ ಮಾಡಬೇಕು. ಹೀಗೆಂದು ಹೇಳಿದ್ದಾರೆ ಬಹುಭಾಷಾ ನಟ ಕಮಲ್ ಹಾಸನ್. ಮಾಸಾಂತ್ಯಕ್ಕೆ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಿ, ಅಲ್ಲಿಯೂ ಒಂದು ಕೈ ನೋಡಲು ಮುಂದಾಗಿರುವ ನಟನ ಖಡಕ್ ಮಾತುಗಳು. ಆಳುವ ಎಐಎಡಿಎಂಕೆಯ 19 ಮಂದಿ ಶಾಸಕರು ಕರ್ನಾಟಕದ ಮಡಿಕೇರಿ ಮತ್ತು ಚೆನ್ನೈ ಸಮೀಪದ ರೆಸಾರ್ಟ್ನಲ್ಲಿ ತಂಗಿರುವುದಕ್ಕೆ ಆಕ್ಷೇಪಿಸಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಕುದುರೆ ವ್ಯಾಪಾರಕ್ಕಾಗಿ ರೆಸಾರ್ಟ್ಗಳಲ್ಲಿ ತಂಗಿರುವ ಶಾಸಕರಿಗೆ ನೋ ವರ್ಕ್; ನೋ ಪೇ ನಿಯಮ ಏಕೆ ಅನ್ವಯವಾಗುತ್ತಿಲ್ಲವೆಂದು ಬರೆದುಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಶಾಲಾ ಶಿಕ್ಷಕರು ತಿಂಗಳ ಸಂಬಳ ರೂ. 33 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ಮುಷ್ಕರ ಹೂಡಿದ್ದರು. ಆದರೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದರು. ಅದೇ ರೀತಿ ಹೈಕೋರ್ಟ್ ಕೂಡ ತಮ್ಮ ಕರ್ತವ್ಯ ಮಾಡದೇ ಇರುವ ಶಾಸಕರನ್ನು ತರಾಟೆಗೆ ತೆಗೆದು ಕೊಳ್ಳ ಬೇಕು ಎಂದು ಮತ್ತೂಂದು ಟ್ವೀಟ್ನಲ್ಲಿ ಬರೆದು ಕೊಂಡಿ ದ್ದಾರೆ. ಈಮೂಲಕ ಹೊಸ ಪಕ್ಷದಲ್ಲಿ ಜನ ಪ್ರತಿನಿಧಿಗಳ ಕರ್ತವ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ