ಸಿಕ್ಕಿಂನಲ್ಲಿ ಭಾರೀ ಹಿಮಪಾತ: 150 ಪ್ರವಾಸಿಗರನ್ನು ರಕ್ಷಿಸಿದ ಸೇನೆ
Team Udayavani, Jan 10, 2019, 5:50 AM IST
ಹೊಸದಿಲ್ಲಿ : ಭಾರೀ ಹಿಮಪಾತ ಸಂಭವಿಸುತ್ತಿರುವ ಉತ್ತರ ಸಿಕ್ಕಿಂ ನಲ್ಲಿ ಸಿಲುಕಿಕೊಂಡಿದ್ದ ಸುಮಾರು 150 ಪ್ರವಾಸಿಗರನ್ನು ಭಾರತೀಯ ಸೇನೆ ಬುಧವಾರ ಸಂಜೆ ನಡೆಸಿದ ಎರಡು ತಾಸುಗಳ ಮಿಂಚಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಎಲ್ಲ ಪ್ರವಾಸಿಗರನ್ನು ಪಾರು ಮಾಡಿ ಸರ್ವತ್ರ ಮೆಚ್ಚುಗೆ, ಪ್ರಶಂಸೆಗೆ ಪಾತ್ರವಾಗಿದೆ.
ಭಾರೀ ಹಿಮಪಾತದಿಂದಾಗಿ ಉತ್ತರ ಸಿಕ್ಕಿಂ ನಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪ ಮಾನವಿದ್ದು ಮನುಷ್ಯನ ದೇಹ ಮರಗಟ್ಟುವಷ್ಟು ಚಳಿ ಇದೆ. ಇಲ್ಲೀಗ ಆಗುತ್ತಿರುವ ಭಾರೀ ಹಿಮಪಾತವು ಅಭೂತಪೂರ್ವವೆಂದು ಹೇಳಲಾಗಿದೆ.
150ರಷ್ಟು ಪ್ರವಾಸಿಗರು ಹಿಮಪಾತದ ನಡುವೆ ಸಿಲುಕಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದೊಡನೆಯೇ ತ್ರಿಶಕ್ತಿ ಪಡೆಗೆ ಸೇರಿದ ಸೈನಿಕರು ಅತ್ಯಂತ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿದರು.
ಸಿಲುಕಿಕೊಂಡಿದ್ದ ಪ್ರವಾಸಿಗರಿಗೆ ಸೈನಿಕರು ಒಡನೆಯೇ ವೈದ್ಯಕೀಯ ತುರ್ತು ಉಪಚಾರ ನೀಡಿದರು. ಮಾತ್ರವಲ್ಲದೆ ತತ್ಕ್ಷಣ ವಾಹನಗಳನ್ನು ದೊರಕಿಸಿ ಪ್ರವಾಸಿಕರನ್ನು ಸಮೀಪದ ಸೇನಾ ಶಿಬಿರಗಳಿಗೆ ಒಯ್ದರು ಎಂದು ಪೂರ್ವ ಕಮಾಂಡ್ನ ಓರ್ವ ಹಿರಿಯ ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ