ಜಾರ್ಖಂಡ್ : ಮದುವೆ ಬಳಿಕ ಈ ಉಡುಗೆ ತೊಡಬೇಡ ಅಂದದಕ್ಕೆ ಪತಿಯನ್ನೇ ಚುಚ್ಚಿ ಕೊಂದ ಪತ್ನಿ
Team Udayavani, Jul 18, 2022, 12:19 PM IST
ಜಾರ್ಖಂಡ್ : ಹೆಂಡತಿಯೇ ತನ್ನ ಗಂಡನನ್ನು ಕ್ಷುಲಕ ಕಾರಣಕ್ಕೆ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಜಾರ್ಖಂಡ್ ನ ಜೋರ್ಭಿತ ಗ್ರಾಮದ ಜಮ್ತಾರದಲ್ಲಿ ನಡೆದಿದೆ.
ಪುಷ್ಪಾ ಹೆಂಬ್ರೋಮ್ ಎಂಬಾಕೆ ತನ್ನ ಗಂಡನನ್ನು ಚಾಕುವಿನಿಂದ ಚುಚ್ಚಿ ಕೊಂದಾಕೆ.
ಪುಷ್ಪಾ ಹೆಂಬ್ರೋಮ್ ಮದುವೆಯ ಬಳಿಕ ಜೀನ್ಸ್ ಪ್ಯಾಂಟ್ ಉಡುವುದು ಆಕೆಯ ಗಂಡನಿಗೆ ಇಷ್ಟವಿರಲಿಲ್ಲ. ಈ ಬಗ್ಗೆ ಗಂಡ – ಹೆಂಡತಿ ನಡುವೆ ಆಗಾಗ ಗಲಾಟೆ ನಡೆಯುತ್ತಲೇ ಇತ್ತು. ಶನಿವಾರ ರಾತ್ರಿ ಊರಿನ ಜಾತ್ರೆ ನೋಡಲು ಪುಷ್ಪಾ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹೋಗಿದ್ದಾಳೆ. ಮನೆಗೆ ವಾಪಾಸ್ ಆಗುವ ವೇಳೆ ಇದೇ ವಿಚಾರಕ್ಕೆ ಮತ್ತೆ ಪತಿ – ಪತ್ನಿ ನಡುವೆ ಮಾತುಕತೆ ನಡೆದು ಜಗಳದ ಹಂತಕ್ಕೆ ತಲುಪಿದೆ.
ಇದನ್ನೂ ಓದಿ: ವಿಚಿತ್ರ ಕೆಲಸ ಮಾಡುತ್ತಿದ್ದಾನೆ ಈ ಯುವಕ: 1 ಗಂಟೆಗೆ 7,000 ರೂ. ಸಂಬಳ!
ಮದುವೆ ಬಳಿಕ ಜೀನ್ಸ್ ಪ್ಯಾಂಟ್ ಹಾಕುವುದು ಸರಿಯಲ್ಲ ಎಂದು ಗಂಡ ಮತ್ತೆ ವಾಗ್ವಾದಕ್ಕೆ ಇಳಿದಾಗ ಸಿಟ್ಟಿನಲ್ಲಿದ್ದ ಹೆಂಡತಿ ಪುಷ್ಪಾ ಚಾಕುವಿನಿಂದ ಗಂಡನ ಮೇಲೆ ಹಲ್ಲೆ ಮಾಡಿದ್ದಾಳೆ.
ಕೂಡಲೇ ಕುಟುಂಬ ಸದಸ್ಯರು ಬಂದು ಗಂಭೀರವಾಗಿ ಗಾಯಗೊಂಡಿದ್ದವನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆ ವೇಳೆಗಾಗಲೇ ಆತ ಮೃತ ಪಟ್ಟಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು