ಒಡಿಶಾದಲ್ಲಿ ಬಿಜೆಪಿ ಹೊಸ ಅಸ್ತ್ರ; ಭಾಷೆ ಬರದ ಸಿಎಂ ಬೇಕಾ?
Team Udayavani, Feb 3, 2019, 1:23 PM IST
ಭುವನೇಶ್ವರ: ಒಡಿಶಾದಲ್ಲಿ ಆಡಳಿತಾರೂಢ ಬಿಜೆಡಿ ವಿರುದ್ಧ ಸಮರ ಸಾರಿರುವ ಬಿಜೆಪಿ ಹೊಸ ಅಸ್ತ್ರವನ್ನು ಪ್ರಯೋಗಿಸಿದ್ದು, ರಾಜ್ಯ ಭಾಷೆ ಒಡಿಯಾ ಬರದ ಸಿಎಂ ನವೀನ್ ಪಟ್ನಾಯಕ್ ನಿಮಗೆ ಬೇಕೆ ಎಂದು ಮತದಾರರನ್ನು ಪ್ರಶ್ನಿಸಿದೆ.
ಪುರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಡಿಶಾದ ಮುಖ್ಯಮಂತ್ರಿಗೆ ಒಡಿಯಾ ಭಾಷೆ ಬರುವುದಿಲ್ಲ. ಅವರು ಆಡಳಿತ ನಡೆಸಲು ಅರ್ಹರಲ್ಲ ಎಂದಿದ್ದಾರೆ.
ನವೀನ್ ಪಟ್ನಾಯಕ್ ಅವರು ಆಯುಷ್ಮಾನ್ ಭಾರತ ಯೋಜನೆಯನ್ನು ಒಡಿಶಾದಲ್ಲಿ ಜಾರಿ ಮಾಡಿಲ್ಲ. ಕಾರಣ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚುತ್ತದೆ ಎನ್ನುವ ಭಯ.ಬೇಕಾದರೆ ಯೋಜನೆಯ ಹೆಸರು ತೆಗೆಯಿರಿ, ಆದರೆ ಬಡ ಜನರೊಂದಿಗೆ ಆಟವಾಡಬೇಡಿ ಎಂದು ಶಾ ಕಿಡಿ ಕಾರಿದರು.
ಶಾ ಅವರು ವಾರದ ಒಳಗೆ 2 ನೇ ಸಮಾವೇಶ ನಡೆಸಿ ಬಿಜೆಡಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.