ಸೂದ್ ಹೆಸರಲ್ಲಿ ಅಂಗಡಿ ; ನೆರವು ನೀಡಿದ್ದಕ್ಕೆ ಒಡಿಶಾ ವ್ಯಕ್ತಿಯ ಕೃತಜ್ಞತೆ
Team Udayavani, Jul 21, 2020, 6:41 AM IST
ಭುವನೇಶ್ವರ: ಲಾಕ್ಡೌನ್ ಅವಧಿಯಲ್ಲಿ ಬಾಲಿವುಡ್ ನಟ ಸೋನು ಸೂದ್ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಿಕೊಟ್ಟು ನೆರವು ನೀಡಿದ್ದರು.
ಆ ರೀತಿ ಸಹಾಯಪಡೆದುಕೊಂಡ ವ್ಯಕ್ತಿ ತವರು ರಾಜ್ಯ ಒಡಿಶಾದಲ್ಲಿ ನಟನ ಹೆಸರಿನಲ್ಲಿ ವೆಲ್ಡಿಂಗ್ ಮಳಿಗೆ ತೆರೆದಿದ್ದಾರೆ. ಈ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಒಡಿಶಾ ರಾಜಧಾನಿ ಭುವನೇಶ್ವರದಿಂದ 140 ಕಿಮೀ ದೂರದಲ್ಲಿರುವ ಹಟಿನಾ ಎಂಬ ಸ್ಥಳದಲ್ಲಿ ಈ ಅಂಗಡಿ ಇದೆ.
ಕೊಚ್ಚಿಯ ಏರ್ಪೋರ್ಟ್ನಲ್ಲಿ ಪ್ಲಂಬರ್ ಆಗಿದ್ದ ಪ್ರಶಾಂತ್ ಕುಮಾರ್ ಪ್ರಧಾನ್ (32) ಎಂಬವರೇ ನಟ ನೀಡಿದ ಸಹಾಯಕ್ಕೆ ಕೃತಜ್ಞತೆಯ ದ್ಯೋತಕವಾಗಿ ಈ ಮಳಿಗೆ ತೆರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನ್ ಕೊಚ್ಚಿಯಲ್ಲಿ ಕೆಲಸ ಕಳೆದುಕೊಂಡಿದ್ದ ವೇಳೆ ನೆರವಿಗಾಗಿ ಅವರಿಗೆ ಮನವಿ ಮಾಡಿದೆ. ಹೀಗಾಗಿ, ಕೊಚ್ಚಿಯಿಂದ ಭುವನೇಶ್ವರಕ್ಕೆ ವಿಶೇಷ ವಿಮಾನದಲ್ಲಿ ತಲುಪುವಂತಾಯಿತು ಎಂದರು.
ಅನುಮತಿ ಸಿಕ್ಕಿದೆ: ವೆಲ್ಡಿಂಗ್ ಶಾಪ್ಗೆ ಸೂದ್ ಹೆಸರು ಇರಿಸುವ ನಿಟ್ಟಿನಲ್ಲಿ ಅನುಮತಿ ಪಡೆದಿರುವುದಾಗಿ ಪ್ರಧಾನ್ ಹೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸೂದ್ “ನಾನು ಇದುವರೆಗೆ ಹಲವು ಬ್ರಾಂಡ್ಗಳಿಗೆ ಪ್ರಚಾರ ರಾಯಭಾರಿಯಾಗಿ ಕೆಲಸ ಮಾಡಿದ್ದೇನೆ. ಇಂಥದ್ದೊಂದು ಬೆಳವಣಿಗೆ ಹೃದಯಕ್ಕೆ ಹತ್ತಿರವಾಗಿದೆ’ ಎಂದು ಹೇಳಿದ್ದಾರೆ. ಸೂದ್ ಸಹಾಯ ಮಾಡಿರುವ ಅಂಶಗಳೆಲ್ಲ ಪುಸ್ತಕ ರೂಪದಲ್ಲಿ ಈ ವರ್ಷದಲ್ಲಿಯೇ ಪ್ರಕಟವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!