ಕರ್ತಾರ್ಪುರ , ಶಾರದಾ ಪೀಠ: ಪಾಕಿಗೆ ಹೊಸ ಸರಕಾರದ ಸ್ಪಂದನೆ, ಉಮರ್ ಹಾರೈಕೆ
Team Udayavani, Mar 26, 2019, 4:18 PM IST
ಶ್ರೀನಗರ : 2019ರ ಲೋಕಸಭಾ ಚುನಾವಣೆಯ ಬಳಿಕ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿರುವ ಹೊಸ ಸರಕಾರವು ಪಾಕಿಸ್ಥಾನದ ವಿಶ್ವಾಸವೃದ್ದಿ ಉಪಕ್ರಮಗಳಿಗೆ ಧನಾತ್ಮಕವಾಗಿ ಸ್ಪಂದಿಸಿ, ಪಾಕ್ ಜತೆಗೆ ಸಮಗ್ರ ಶಾಂತಿ ಮಾತುಕತೆಗೆ ಮುಂದಾದೀತು ಎಂಬ ಹಾರೈಕೆಯನ್ನು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲ ವ್ಯಕ್ತಪಡಿಸಿದ್ದಾರೆ.
ಸಿಕ್ಖರ ಪವಿತ್ರ ಗುರುದ್ವಾರ ಕರ್ತಾರ್ಪುರ್ ಸಾಹಿಬ್ ಗೆ ತೆರಳಲು ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿರುವ ಬೆನ್ನಿಗೇ ಇದೀಗ ಹಿಂದೂಗಳ ಪವಿತ್ರ ಶಾರದಾ ಪೀಠಕ್ಕೆ ತೆರಳಲು ಕಾರಿಡಾರ್ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಿರುವ ಪಾಕಿಸ್ಥಾನದ ಈ ವಿಶ್ವಾಸ ವೃದ್ಧಿ ಉಪಕ್ರಮಗಳಿಗೆ ಕೇಂದ್ರದಲ್ಲಿ ಸದ್ಯದಲ್ಲೇ ಅಧಿಕಾರಕ್ಕೆ ಬರಲಿರುವ ಹೊಸ ಸರಕಾರ ಸೂಕ್ತ ರೀತಿಯಲ್ಲಿ ಧನಾತ್ಮಕವಾಗಿ ಸ್ಪಂದಿಸಬೇಕಿದೆ ಎಂದು ಉಮರ್ ಅಬ್ದುಲ್ಲ ಹೇಳಿದ್ದಾರೆ.
ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರಕಾರ, ಪಾಕಿಸ್ಥಾನದ ಜತೆಗೆ ಶಾಂತಿ, ಸೌಹಾರ್ದದ ಸಮಗ್ರ ಮಾತುಕತೆ ಆರಂಭಿಸಲಿದೆ ಎಂದು ಹಾರೈಸಬಹುದಾಗಿದೆ; ಅಂತೆಯೇ ಆ ದಿಶೆಯಲ್ಲಿ ಹೊಸ ಶಕೆ ಆರಂಭಗೊಂಡೀತೆಂದು ಆಶಿಸಬಹುದಾಗಿದೆ ಎಂದು ಉಮರ್ ಅಬ್ದುಲ್ಲ ತಮ್ಮ ಸರಣಿ ಟ್ವೀಟ್ ನಲ್ಲಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ