ದೇಶದ ಏಕತೆಯಲ್ಲಿ ರಾಜಿ ಬೇಡ: ಮೋದಿ
Team Udayavani, Apr 22, 2022, 6:23 AM IST
ಹೊಸದಿಲ್ಲಿ: “ದೇಶದ ಏಕತೆ ಹಾಗೂ ಸಮಗ್ರತೆಯ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳಬಾರದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
15ನೇ ನಾಗರಿಕ ಸೇವೆಗಳ ದಿನಾಚರಣೆಯಲ್ಲಿ ದೇಶದ ಅಧಿಕಾರಶಾಹಿ ವರ್ಗವನ್ನು ಉದ್ದೇಶಿಸಿ ಗುರುವಾರ ಅವರು ಮಾತನಾಡಿದರು. “ದೇಶದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬ ನಾಗರಿಕ ಸೇವಾ ಅಧಿಕಾರಿಯ ಕರ್ತವ್ಯವಾಗಿದೆ. ನಾವು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ, ಅದು ಸ್ಥಳೀಯ ಮಟ್ಟದಲ್ಲೇ ಆಗಿರಲಿ ಅಥವಾ ಎಷ್ಟೇ ಜನಪ್ರಿಯವೂ ಆಗಿರಲಿ ಇಡೀ ದೇಶದ ಏಕತೆ ಮತ್ತು ಸಮಗ್ರತೆಗೆ ಅಡ್ಡಿ ಉಂಟು ಮಾಡಬಹುದೇ ಎಂಬುದನ್ನು ಯೋಚಿಸಿ ಮುಂದಡಿಯಿಡಬೇಕು’ ಎಂದಿದ್ದಾರೆ.
ದಿಲ್ಲಿಯ ಜಹಾಂಗಿರ್ಪುರಿ ಸೇರಿದಂತೆ ಹಲವು ಕಡೆ ಕೋಮು ಗಲಭೆಗಳು ನಡೆಯುತ್ತಿರುವಾಗಲೇ ಮೋದಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.