ಬಲ ಪ್ರಯೋಗಿಸಿ ಧರಣಿ ನಿಲ್ಲಿಸಲು ಯತ್ನ: ಕೇಜ್ರಿ
Team Udayavani, Jun 16, 2018, 8:20 AM IST
ಹೊಸದಿಲ್ಲಿ: IAS ಅಧಿಕಾರಿಗಳ ಮುಷ್ಕರ ಕೊನೆಗಾಣಿಸಲು ನಡೆಸುತ್ತಿರುವ ಧರಣಿಯನ್ನು ಬಲವಂತವಾಗಿ ಕೊನೆಗೊಳಿಸಲು ಕೇಂದ್ರ ಮುಂದಾಗಿದೆ ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ಧರಣಿ ನಡೆಸುತ್ತಿರುವ ನಾನು ಗಟ್ಟಿಮುಟ್ಟಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ನಿವಾಸದಲ್ಲಿ ನಡೆಯುತ್ತಿರುವ ಧರಣಿ ಶುಕ್ರವಾರ 5ನೇ ದಿನ ಪ್ರವೇಶಿಸಿದೆ. ಈ ನಡುವೆ ಹಲವು ಆ್ಯಂಬುಲೆನ್ಸ್ಗಳು ಪ್ರವೇಶಿಸಿದ್ದು, ಆಪ್ ನಾಯಕರಲ್ಲಿ ಆತಂಕಕ್ಕೆ ಕಾರಣವಾಯಿತು. ಧರಣಿ ನಿಲ್ಲಿಸುವ ಯತ್ನ ಮಾಡಿದರೆ ನೀರು ಕೂಡ ಕುಡಿಯುವುದಿಲ್ಲ ಎಂದು ಕೇಜ್ರಿವಾಲ್ ಗೆ ಸಾಥ್ ನೀಡಿರುವ ಉಪಮುಖ್ಯಮಂತ್ರಿ ಮನೀಶ್ ಸಿಸ್ಸೋಡಿಯಾ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಮುಷ್ಕರ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ.