ಜಮ್ಮು ಕಾಶ್ಮೀರ ಏಕೀಕರಣ: ಪಾಕ್ ದಿನದಂದು ಭಾರತದ ಸ್ಪಷ್ಟ ಸಂದೇಶ
Team Udayavani, Mar 23, 2017, 4:09 PM IST
ಹೊಸದಿಲ್ಲಿ : ಪಾಕಿಸ್ಥಾನದ ಅಕ್ರಮ ವಶದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ ಬಾಲ್ಟಿಸ್ಥಾನವನ್ನು ಭಾರತ ಸ್ವತಂತ್ರಗೊಳಿಸಿ ಅದನ್ನು ಜಮ್ಮು ಕಾಶ್ಮೀರದ ಜತೆಗೆ ಏಕೀಕರಿಸಿಯೇ ತೀರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ಕಾರ್ಯಾಲಯದ ಕೇಂದ್ರ ಸಹಾಯಕ ಸಚಿವ ಜೀತೇಂದ್ರ ಸಿಂಗ್ ಅವರು ಇಂದಿನ “ಪಾಕಿಸ್ಥಾನ ದಿನಾಚರಣೆ’ಯಂದು ಇಸ್ಲಾಮಾಬಾದಿಗೆ ನೀಡಿದ್ದಾರೆ.
ಗಿಲ್ಗಿಟ್ – ಬಾಲ್ಟಿಸ್ಥಾನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಅದರ ಮೂಲ ಅಖಂಡ ರೂಪದಲ್ಲಿ ಪುನಃಸ್ಥಾಪಿಸುವುದೇ ಭಾರತದ ಗುರಿಯಾಗಿದೆ ಎಂದು ಜೀತೇಂದ್ರ ಸಿಂಗ್ ಹೇಳಿದರು.
1940ರ ಮಾರ್ಚ್ 23ರಂದು ಮುಸ್ಲಿಮರಿಗಾಗಿ ಪ್ರತ್ಯೇಕ ಮಾತೃಭೂಮಿಯನ್ನು ಆಗ್ರಹಿಸಿ ಲಾಹೋರ್ನಲ್ಲಿ ಕೈಗೊಳ್ಳಲಾದ ಠರಾವಿನ ಸ್ಮರಣಾರ್ಥ ಇಂದು ಪಾಕಿಸ್ಥಾನದಲ್ಲಿ ” ಪಾಕಿಸ್ಥಾನ ದಿನ’ ಅಥವಾ “ಪಾಕಿಸ್ಥಾನ ಗಣರಾಜ್ಯ ದಿನ’ವನ್ನು ಆಚರಿಸಲಾಗುತ್ತಿದೆ.
ಈ ತಿಂಗಳ ಆದಿಯಲ್ಲಿ ಪಾಕ್ ವಿದೇಶ ನೀತಿಗಳ ಮುಖ್ಯಸ್ಥರಾಗಿರುವ ಸರ್ತಾಜ್ ಅಜೀಜ್ ಅವರು ಪಾಕ್ ಆಡಳಿತೆಯ ಕಾಶ್ಮೀರದಲ್ಲಿನ ನಿಯಂತ್ರಣ ರೇಖೆಯ ಉ¤ರದಲ್ಲಿರುವ ಗಿಲ್ಗಿಟ್ – ಬಾಲ್ಟಿಸ್ಥಾನವನ್ನು ಪಾಕಿಸ್ಥಾನದ ಐದನೇ ಪ್ರಾಂತವನ್ನಾಗಿ ರೂಪಿಸುವ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಇದು ತನಗೆ ಸ್ವೀಕಾರಾರ್ಹವಲ್ಲ ಎಂದು ಭಾರತ ಆಗಲೇ ಪಾಕಿಸ್ಥಾನಕ್ಕೆ ತನ್ನ ಆಕ್ಷೇಪವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ