ಗೋರಕ್ಷಕರ ಕಾಟ: ಆನ್ಲೈನ್ನಲ್ಲಿನ್ನು ಗೋಮಾತೆ!
Team Udayavani, Apr 22, 2017, 3:45 AM IST
ಜೈಪುರ: ರಾಜಸ್ಥಾನ ಅಳ್ವಾರ್ನಲ್ಲಿ ಕೆಲದಿನಗಳ ಹಿಂದೆ ಅಕ್ರಮವಾಗಿ ದನ ಸಾಗಿಸುತ್ತಿದ್ದಾನೆಂದು ವ್ಯಕ್ತಿಯನ್ನು ಥಳಿಸಿ ಸಾಯಿಸಲಾಗಿತ್ತು. ಹೀಗಾಗಿ ಸಾಕಲೆಂದು ಹಸು ಸಾಗಿಸುವವರು ಗೋರಕ್ಷಕರು ನೀಡುವ ಕಾಟಕ್ಕೆ ಬೇಸತ್ತ ರಾಜಸ್ಥಾನದ ಜಾನುವಾರು ವ್ಯಾಪಾರಿಗಳು ಈಗ ಆನ್ಲೈನ್ ವೇದಿಕೆಯ ಮೊರೆ ಹೋಗಿದ್ದಾರೆ. ಗ್ರಾಹಕರು ಮುಂಗಡವಾಗಿ ಹಣ ಕೊಟ್ಟರೆ ಹಸುಗಳನ್ನು ಸುರಕ್ಷಿತವಾಗಿ ಅವರ ಮನೆಗೆ ತಲುಪಿಸುವ ಭರವಸೆಯನ್ನು ವ್ಯಪಾರಿಗಳು ನೀಡುತ್ತಿದ್ದಾರೆ.
ಕೆಲ ವೆಬ್ಸೈಟ್ಗಳಲ್ಲಿ ಹಸುಗಳು ಆನ್ಲೈನ್ನಲ್ಲಿ ಮಾರಾಟಕ್ಕಿವೆ. ಬೆಲೆ 35ರಿಂದ 50 ಸಾವಿರ ರೂ. ಎಂಬ ಜಾಹೀರಾತುಗಳು ಕಾಣಿಸಿಕೊಂಡಿವೆ. “ಹಸು ಮಾರಾಟ ಮಾಡುವುದು ಎಂದಿಗೂ ಸವಾಲಿನ ವ್ಯವಹಾರವೇ.
ಉ.ಪ್ರ.ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಸುಗಳ ವ್ಯಾಪಾರ ತೀರಾ ಕಷ್ಟವಾಗಿದೆ. ಹೀಗಾಗಿ ಆನ್ಲೈನ್ ವಹಿವಾಟು ಆರಂಭಿಸಿದ್ದೇವೆ. ಹಸು ಕೊಳ್ಳಲಿಚ್ಛಿಸುವ ಗ್ರಾಹಕರು ಅಳ್ವಾರಕ್ಕೆ ಬಂದು ಹಸು ನೋಡಿ, ಕೊಳ್ಳುವ ಮನಸಾದರೆ ಮುಂಗಡವಾಗಿ ಹಣ ಪಾವತಿಸಬೇಕು. ನಂತರ ನಾವು ಅವರ ಸ್ಥಳಕ್ಕೆ ಹಸು ತಲುಪಿಸುತ್ತೇವೆ. ಹಾಲು ಕೊಡುವ ಹಸುಗಳನ್ನು ಮಾತ್ರ ಮಾರಾಟ ಮಾಡುತ್ತೇವೆ ಮತ್ತು ಹಸು ಸಾಗಿಸಲು ಅಗತ್ಯವಿರುವ ಎಲ್ಲ ಅಧಿಕೃತ ನಿಯಮಗಳನ್ನು ಅನುಸರಿಸುತ್ತೇವೆ,’ ಎಂದು ಸಹಿವಾಲ್ ತಳಿಯ ಹಸು ಮಾರಾಟಕ್ಕಿರಿಸಿದ್ದ ಅಳ್ವಾರ್ನ ಸತೀಶ್ ಯಾದವ್ ಹೇಳಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ