
ಭಾರತ ಮಾತ್ರವೇ ನಿಮಗೆ ಬೇಕಾದ್ದನ್ನು ನೀಡಬಲ್ಲುದು: ಮೆಹಬೂಬ ಮುಫ್ತಿ
Team Udayavani, Jan 10, 2018, 7:04 PM IST

ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ರಾಜ್ಯದ ಜನತೆಗೆ ಒಂದು ಸಂದೇಶ ನೀಡಿದ್ದಾರೆ. ರಾಜ್ಯ ವಿಧಾನ ಸಭೆಯಲ್ಲಿ ಮಾತನಾಡುತ್ತಾ ಅವರು, “ಜಮ್ಮು ಕಾಶ್ಮೀರದ ಜನರಿಗೆ ಏನು ಬೇಕೋ ಅದನ್ನು ಭಾರತ ಮಾತ್ರವೇ ನೀಡಬಲ್ಲುದು; ಹೊರತು ಬೇರೆ ಯಾವ ದೇಶವೂ ಅಲ್ಲ’ ಎಂದು ಹೇಳಿದರು.
“ನಮಗೆ ಜಮ್ಮು ಕಾಶ್ಮೀರದ ಸಂವಿಧಾನದ ಮೇಲೆ, ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲವೆಂದಾದರೆ ಬೇರೆ ಯಾವುದರಲ್ಲಿ ನಂಬಿಕೆ ಇರಬಲ್ಲುದು ? ಹಾಗಿರುವಾಗ ನಮಗೆ ಸಿಗುವುದಾದರೂ ಏನು ? ನಮಗೆ ಬೇಕಾದದ್ದು ಬೇರೆ ಎಲ್ಲಿಂದ ಸಿಗಬೇಕು?’ ಎಂದು ಮೆಹಬೂಬ ಮುಫ್ತಿ ಪ್ರಶ್ನಿಸಿದರು.
ಭಾರತದಿಂದಲ್ಲದೆ ಬೇರೆ ಯಾವ ದೇಶದಿಂದಲೂ ನಮಗೆ ಬೇಕಾದದ್ದು ಸಿಗುವುದಿಲ್ಲ ಎಂಬುದನ್ನು ನಾವು ಎಂದೂ ಮರೆಯಬಾರದು ಎಂದು ಮೆಹಬೂಬ ರಾಜ್ಯದ ಜನರಿಗೆ ಹೇಳಿದರು.
ಭಾರತ ಮತ್ತು ಪಾಕಿಸ್ಥಾನದ ನಾಯಕರು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ದ್ವೇಷವನ್ನು ತೊರೆದು ಮತ್ತೆ ಮಿತ್ರರಾಗಬೇಕು; ಸ್ಥಳೀಯ ಕಾಶ್ಮೀರಿಗಳಿಗಾಗಿ ಮತ್ತು ಗಡಿಯಲ್ಲಿನ ಜವಾನರಿಗಾಗಿ ಉಭಯ ದೇಶಗಳು ಮತ್ತೆ ಸ್ನೇಹಿತರಾಗಬೇಕು ಎಂದು ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿಯಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ’ ಎಂದು ಮೆಹಬೂಬ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಕ್ರೀಡೆಗೆ 700 ಕೋಟಿ ರೂ. ಅಧಿಕ ಉತ್ತೇಜನ

ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ರೂ.: ದೇಶೀಯವಾಗಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು

‘ಮಿತ್ರ್ ಕಾಲ್’ ಬಜೆಟ್ ನಲ್ಲಿ ಭಾರತದ ಭವಿಷ್ಯವಿಲ್ಲ: ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್

Union Budget 2023: 20 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ-ಕೃಷಿ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
