ಜಾಮೀನಿಗೆ ವಿರೋಧ
Team Udayavani, Feb 14, 2019, 12:30 AM IST
ಹೊಸದಿಲ್ಲಿ: ಅಗಸ್ಟಾ ವೆಸ್ಟ್ಲ್ಯಾಂಡ್ ಕಾಪ್ಟರ್ ಹಗರಣದಲ್ಲಿ ಬಂಧಿತ ದಲ್ಲಾಳಿ ಕ್ರಿಶ್ಚಿಯನ್ ಮೈಕೆಲ್ ಸಲ್ಲಿಸಿರುವ ಜಾಮೀನು ಅರ್ಜಿಯ ತೀರ್ಪನ್ನು ಬುಧವಾರ ದಿಲ್ಲಿ ಕೋರ್ಟ್ ಕಾಯ್ದಿರಿಸಿದೆ. ಫೆ. 15ರೊಳಗೆ ಲಿಖೀತ ವಾದವನ್ನು ಮಂಡಿಸುವಂತೆ ಎರಡೂ ಪಕ್ಷಗಳಿಗೆ ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಸೂಚಿಸಿದ್ದಾರೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮೈಕೆಲ್ಗೆ ಜಾಮೀನು ನೀಡಲು ವಿರೋಧ ವ್ಯಕ್ತಪಡಿಸಿದ್ದು, ಪ್ರಕರಣದಲ್ಲಿ ಸಲ್ಲಿಸಲಾದ ಚಾರ್ಜ್ಶೀಟನ್ನು ಪರಿಗಣಿಸಿದ್ದು, ಈ ಸನ್ನಿವೇಶದಲ್ಲಿ ಜಾಮೀನು ನೀಡಬಾರದು ಎಂದು ಆಗ್ರಹಿಸಿದೆ. ಅವರ ವಿಚಾರಣೆ ಪ್ರಮುಖ ಹಂತದಲ್ಲಿದೆ ಎಂದು ಸಿಬಿಐ ಪರ ವಕೀಲ ಡಿ.ಪಿ.ಸಿಂಗ್ ಹೇಳಿದ್ದಾರೆ.