ಯೋಧರಿಗೆ ಇನ್ನು ಖಾದಿ ಸಮವಸ್ತ್ರ
ಗೃಹಸಚಿವ ಅಮಿತ್ ಶಾ ಸೂಚನೆಯಂತೆ ನಿರ್ಧಾರ
Team Udayavani, Dec 5, 2019, 8:27 PM IST
ನವದೆಹಲಿ: ದೇಶದ 10 ಲಕ್ಷಕ್ಕೂ ಅಧಿಕ ಯೋಧರು, ಇನ್ನು ಮುಂದೆ ಖಾದಿ ಸಮವಸ್ತ್ರ ಧರಿಸಲಿದ್ದಾರೆ. ಸ್ವತಃ ಕೇಂದ್ರ ಗೃಹಸಚಿವ ಅಮಿತ್ ಶಾ ಸೂಚನೆಯಂತೆ ಈ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಸ್ವದೇಶಿ ನಿರ್ಮಿತ ವಸ್ತುಗಳನ್ನು ಪ್ರೋತ್ಸಾಹಿಸಲು ಅಮಿತ್ ಶಾ ಈ ಕ್ರಮ ಕೈಗೊಂಡಿದ್ದಾರೆ. ಅದಕ್ಕೂ ಮುನ್ನ ಸೇನಾಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದಾರೆ.
ಎಲ್ಲವನ್ನೂ ಪರಿಶೀಲಿಸಿದ ಮೇಲೆ ಸಿಆರ್ಪಿಎಫ್, ಬಿಎಸ್ಎಫ್, ಎಸ್ಎಸ್ಬಿ, ಐಟಿಬಿಪಿ, ಸಿಐಎಸ್ಎಫ್, ಎನ್ಎಸ್ಜಿ ಮತ್ತು ಅಸ್ಸಾಂ ರೈಫಲ್ಸ್ಗೆ ಸೇರಿದ 10 ಲಕ್ಷಕ್ಕೂ ಅಧಿಕ ಯೋಧರಿಗೆ ಖಾದಿ ಸಮವಸ್ತ್ರ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಖಾದಿ ಆಯೋಗ ಮತ್ತು ಗ್ರಾಮೀಣ ಕೈಗಾರಿಕೆ ಆಯೋಗದೊಂದಿಗೆ ಮಾತುಕತೆ ನಡೆಸಲಾಗಿದೆ. ಇದು ಜಾರಿಯಾದರೆ ದೇಶದ ಖಾದಿ ಉದ್ಯಮದ ಸ್ವರೂಪವೇ ಬದಲಾಗಲಿದೆ.
ಪ್ರಸ್ತುತ ಯೋಧರು ಹತ್ತಿಯ ಬಟ್ಟಗಳನ್ನು ಬಳಸುತ್ತಿದ್ದಾರೆ (ಸಂಪೂರ್ಣ ಯಂತ್ರನಿರ್ಮಿತ). ಮುಂದೆ ಕೈಮಗ್ಗದಿಂದ ತಯಾರಾದ ಖಾದಿ ಬಟ್ಟೆ ಬಳಕೆಯಾಗಲಿದೆ. ಈಗಾಗಲೇ ಸಮವಸ್ತ್ರದ ಮಾದರಿಯನ್ನು ನೀಡಲಾಗಿದೆ. ಆದರೆ ಸಿಆರ್ಪಿಎಫ್ ಬಳಸುವ ವಸ್ತ್ರಗಳಿಗೂ, ಬಿಎಸ್ಎಫ್ನ ವಸ್ತ್ರಗಳಿಗೂ ವ್ಯತ್ಯಾಸವಿದೆ. ಅದನ್ನು ನೋಡಿಕೊಂಡು ಸಮವಸ್ತ್ರ ಪಡೆಯಲಾಗುತ್ತದೆ ಎಂದು ಸೇನಾಮುಖ್ಯಸ್ಥರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ