20 ಲಕ್ಷ ರೂ.ಗಳ 201 ಕಿಲೋ ಗಾಂಜಾ ವಶ; ಇಬ್ಬರ ಬಂಧನ
Team Udayavani, Oct 27, 2017, 3:30 PM IST
ರಾಜಾಮಹೇಂದ್ರವರಂ : ಕಂದಾಯ ಗುಪ್ತಚರ ವಿಭಾಗದವರು ಇಲ್ಲಿಗೆ ಸಮೀಪ ಕಾರೊಂದನ್ನು ತಡೆದು ತಪಾಸಣೆ ನಡೆಸಿದಾಗ 201 ಕಿಲೋ ಗಾಂಜಾ ಪತ್ತೆಯಾಗಿದ್ದು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ನಿನ್ನೆ ಗುರುವಾರ ವಿಜಯವಾಡ ಮತ್ತು ಕಾಕಿನಾಡ ಡಿಆರ್ಐ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಿ ರಾಜಾಮಹೇಂದ್ರವರಂ ಸಮೀಪ ಶಂಕಿತ ಕಾರನ್ನು ತಡೆದು ಅದರೊಳಗಿದ್ದ 201.35 ಕಿಲೋ ಗಾಂಜಾವನ್ನು ವಶಪಡಿಸಿಕೊಂಡರು.
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಟುನಿ ಸಮೀಪದ ಕಾಟನಂದೂರು ಗ್ರಾಮದಿಂದ ಈ ಗಾಂಜಾವನ್ನು ತರಲಾಗಿದ್ದು ಅದನ್ನು ಪಶ್ಚಿಮ ಗೋದಾವರಿಯ ದೇವರಪಲ್ಲಿ ಪಟ್ಟಣಕ್ಕೆ ಒಯ್ಯಲಾಗುತ್ತಿತ್ತು.
ಈ ಗಾಂಜಾದ ಬೆಲೆ ಅಂದಾಜು 20 ಲಕ್ಷ ರೂ. ಇದೆ. ಕಾರನ್ನು ವಶಪಡಿಸಿಕೊಂಡ ಚಾಲಕನ ಸಹಿತ ಇಬ್ಬರನ್ನು ಬಂಧಿಸಲಾಗಿದೆ ಎಂದು ಡಿಆರ್ಐ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು