ಪಾಕ್ ಇನ್ನೂ ಮೃತದೇಹಗಳ ಲೆಕ್ಕಹಾಕುತ್ತಿದ್ರೆ, ವಿಪಕ್ಷ ಪುರಾವೆ ಕೇಳುತ್ತಿವೆ! ಮೋದಿ
Team Udayavani, Mar 29, 2019, 4:01 PM IST
ಒಡಿಶಾ(ಕೋರಾಪುಟ್): ಬಾಲಾಕೋಟ್ ನಲ್ಲಿ ಭಾರತದ ವಾಯುಪಡೆ ನಡೆಸಿದ ದಾಳಿಯಿಂದಾಗಿ ಪಾಕಿಸ್ತಾನ ಇನ್ನೂ ಸಾವನ್ನಪ್ಪಿರುವ ಉಗ್ರರ ಶವಗಳ ಲೆಕ್ಕಹಾಕುತ್ತಿದೆ, ಆದರೆ ವಿಪಕ್ಷಗಳು ದಾಳಿ ಬಗ್ಗೆ ಸಾಕ್ಷಿ ಕೇಳುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.
ಮುಂದಿನ ತಿಂಗಳು ಒಡಿಶಾದಲ್ಲಿ ನಡೆಯಲಿರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಶುಕ್ರವಾರ ಮಾತನಾಡಿದ ಅವರು, ಭಾರತದ ವಾಯುಪಡೆ ದಾಳಿ ನಡೆಸಿ ಒಂದು ತಿಂಗಳು ಕಳೆಯುತ್ತಾ ಬಂದಿದ್ದು, ಪಾಕಿಸ್ತಾನ ಇನ್ನೂ ಶವಗಳ(ಉಗ್ರರ) ಲೆಕ್ಕದಲ್ಲಿ ತೊಡಗಿದೆ. ಇಲ್ಲಿರುವ ವ್ಯಕ್ತಿಗಳು(ವಿಪಕ್ಷಗಳು) ಮಾತ್ರ ಸಾಕ್ಷ್ಯ ಕೇಳುತ್ತಿದ್ದಾರೆ ವಾಗ್ದಾಳಿ ನಡೆಸಿದರು.
ಭಾರತ ಉಗ್ರರ ವಿರುದ್ಧ ಸೆಣಸಲು ಶತ್ರುದೇಶದೊಳಕ್ಕೆ ನುಗ್ಗಿ ದಾಳಿ ನಡೆಸಿದ್ದರೆ. ವಿಪಕ್ಷ ನಾಯಕರು ಪುರಾವೆ ಕೇಳುತ್ತಾರೆ. ಅದೇ ರೀತಿ ಮಿಷನ್ ಶಕ್ತಿ ಯಶಸ್ಸಿನ ಬಗ್ಗೆ ಟೆಲಿವಿಷನ್ ನಲ್ಲಿ ಮಾತನಾಡಿರುವ ಬಗ್ಗೆಯೂ ಟೀಕಿಸುತ್ತಿದ್ದಾರೆ ಎಂದರು.
ಎರಡು ದಿನಗಳ ಹಿಂದಷ್ಟೇ ಒಡಿಶಾ ಸೇರಿದಂತೆ ಭಾರತ ಮಾತ್ರವಲ್ಲ ಜಗತ್ತೇ ನಮ್ಮ ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು. ಇದೀಗ ಭಾರತ ಬಾಹ್ಯಾಕಾಶದಲ್ಲಿಯೂ ಶಕ್ತಶಾಲಿಯಾಗಿದೆ. ಇದನ್ನು ಇಡೀ ವಿಶ್ವವೇ ಗಮನಿಸಿದೆ. ಅಷ್ಟೇ ಅಲ್ಲ ಭಾರತ ಇನ್ಮುಮದೆ ಬಾಹ್ಯಾಕಾಶದಲ್ಲಿಯೂ ಚೌಕಿದಾರಿ ಕೆಲಸ ಮಾಡಲಿದೆ. ಇದಕ್ಕಾಗಿ ನಾವು ನಮ್ಮ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಬೇಕಾಗಿದೆ ಎಂದು ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
MUST WATCH
ಹೊಸ ಸೇರ್ಪಡೆ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ