ಭಾರತದ ಕಟು ಎಚ್ಚರಿಕೆ ಕಡೆಗಣಿಸಿ ಪಾಕ್ ಮತ್ತೆ ಕದನ ವಿರಾಮ ಉಲ್ಲಂಘನೆ
Team Udayavani, Jul 18, 2017, 11:06 AM IST
ಶ್ರೀನಗರ : ಪಾಕಿಸ್ಥಾನದ ಸೇನೆ ಇಂದು ಮಂಗಳವಾರ ಕೂಡ, ಭಾರತದ ಕಟು ಎಚ್ಚರಿಕೆಯನ್ನು ಕಡೆಗಣಿಸಿ, ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಜಮ್ಮು ಕಾಶ್ಮೀರದ ಭಿಂಭೇರ್ ಗಾಲಿ ಮತ್ತು ಪೂಂಚ್ ವಲಯದಲ್ಲಿ ಗುಂಡಿನ ದಾಳಿ ನಡೆಸಿದೆ.
ಪಾಕ್ ಪಡೆಗಳ ಈ ದಾಳಿಗೆ ಭಾರತ ಅತ್ಯುಗ್ರ ಉತ್ತರ ನೀಡಿದೆ. ಇಂದು ಮಂಗಳವಾರ ಬೆಳಗ್ಗೆ 6.45ರ ಹೊತ್ತಿಗೆ ಗಡಿಯಲ್ಲಿ ಪಾಕ್ನಿಂದ ಅಪ್ರಚೋದಿತ ಗುಂಡಿನ ದಾಳಿ ಆರಂಭವಾಗಿದ್ದು ಈ ಹೊತ್ತಿನಲ್ಲೂ ಅದು ಮುಂದುವರಿದಿದೆ.
ಜಮ್ಮು ಕಾಶ್ಮೀರದ ಪೂಂಚ್, ರಾಜೋರಿ ಮತ್ತು ಬಾರಾಮೂಲಾ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆಗೈದು ಪಾಕ್ ಸೇನೆ ನಡೆಸಿದ್ದ ಭಾರೀ ಗುಂಡಿನ ಹಾಗೂ ಮೋರ್ಟಾರ್ ಶೆಲ್ಲಿಂಗ್ ದಾಳಿಗೆ ನಿನ್ನೆಯಷ್ಟೇ ಓರ್ವ ಭಾರತೀಯ ಜವಾನ ಹುತಾತ್ಮನಾಗಿ ಏಳು ವರ್ಷ ಪ್ರಾಯದ ಬಾಲಕಿ ಹತಳಾಗಿದ್ದಳು.
ಪಾಕಿಸ್ಥಾನದ ಈ ದಾಳಿಗೆ ಭಾರತ ಪ್ರಬಲ ಉತ್ತರ ನೀಡಿದ ಪರಿಣಾಮವಾಗಿ ನಾಲ್ವರು ಪಾಕ್ ಯೋಧರು ಮಡಿದಿರುವುದಾಗಿ ತಿಳಿದುಬಂದತ್ತು.
ಇದನ್ನು ಅನುಸರಿಸಿ ನಿನ್ನೆ ಸೋಮವಾರವೇ ಪಾಕ್ ಡಿಜಿಎಂಓ ಅವರು ಭಾರತದ ಡಿಜಿಎಂಏ ಜತೆಗೆ ಫೋನ್ ಸಂಭಾಷಣೆ ನಡೆಸಿದ್ದರು. ಸಾಮಾನ್ಯವಾಗಿ ಪ್ರತೀ ಮಂಗಳವಾರ ಈ ರೀತಿಯ ಫೋನ್ ಸಂಭಾಷಣೆ ನಡೆಯುತ್ತದೆ. ಆದರೆ ನಿನ್ನೆ ಸೋಮವಾರವೇ ಪಾಕ್ ಅಧಿಕಾರಿ ಫೋನಿನಲ್ಲಿ ಮಾತನಾಡಿದ್ದು ಗಡಿಯಲ್ಲಿ ಕಳವಳಕಾರಿ ಸಂಘರ್ಷದ ತೀವ್ರತೆಗೆ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ