ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ
Team Udayavani, May 18, 2018, 9:25 AM IST
ಜಮ್ಮು/ಹೊಸದಿಲ್ಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ರಮ್ಜಾನ್ ಮತ್ತು ಅಮರನಾಥ ಯಾತ್ರೆ ಸಲುವಾಗಿ ಕೇಂದ್ರ ಸರಕಾರ ಕದನ ವಿರಾಮ ಘೋಷಿಸಿದ ಹೊರತಾಗಿಯೂ ಕಣಿವೆ ರಾಜ್ಯದ ಕಥುವಾ ಮತ್ತು ಸಾಂಬಾ ಜಿಲ್ಲೆ ವ್ಯಾಪ್ತಿಯಲ್ಲಿರುವ LOCಯಲ್ಲಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿವೆ. ಇದರಿಂದಾಗಿ ಬಿ.ಎಸ್.ಎಫ್. ಯೋಧ ಸಹಿತ ಇಬ್ಬರು ಗಾಯಗೊಂಡಿದ್ದಾರೆ. ಬುಧವಾರ ತಡ ರಾತ್ರಿ 2 ಗಂಟೆಯಿಂದ ಸಾಂಬಾದಲ್ಲಿ ಮತ್ತು ಕಥುವಾದಲ್ಲಿ ರಾತ್ರಿ 10 ಗಂಟೆಯಿಂದ ಗುಂಡು ಹಾರಾಟ ಶುರುವಾಗಿತ್ತು.
ಇದೇ ವೇಳೆ ಘೋಷಿತ ಕದನ ವಿರಾಮ ಗುರುವಾರದಿಂದ ಜಾರಿಗೆ ಬಂದಿದ್ದು, ಅದು ಹೇಗೆ ಯಶಸ್ವಿಯಾಗುವುದೇ ಎಂದು ಕೇಂದ್ರ ಭದ್ರತಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಎರಡು ದಶಕಗಳ ಹಿಂದಿನಿಂದಲೂ ಇದೇ ಪದ್ಧತಿ ಅನುಸರಿಸಿದ್ದರೂ 43 ಮಂದಿ ಭದ್ರತಾ ಸಿಬ್ಬಂದಿ ಸಹಿತ 129 ಮಂದಿ ಸಾವಿಗೀಡಾಗಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು