ಟಿಪ್ಪು ಸುಲ್ತಾನ್ ಕೊಂಡಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಶಶಿ ತರೂರ್ ಪ್ರಶಂಸೆ
Team Udayavani, May 7, 2019, 3:30 PM IST
ಹೊಸದಿಲ್ಲಿ : ಬ್ರಿಟಿಷರ ವಿರುದ್ದ ಕಾದಾಡಿ ಪ್ರಾಣಾರ್ಪಣೆ ಗೈದಿದ್ದ ಮೈಸೂರಿನ ಹುಲಿ ಎಂದೇ ಇತಿಹಾಸದಲ್ಲಿ ಜನಜನಿತವಾಗಿರುವ ಟಿಪ್ಪು ಸುಲ್ತಾನನ ಧೈರ್ಯ-ಸ್ಥೈರ್ಯವನ್ನು ಕಳೆದ ಮೇ 4ರಂದು ಆತನ ಮರಣ ವರ್ಷಾಚರಣೆಯ ಸಂದರ್ಭದಲ್ಲಿ ಟ್ವಿಟರ್ನಲ್ಲಿ ಹಾಡಿ ಹೊಗಳಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಬಹುವಾಗಿ ಪ್ರಶಂಸಿಸಿದ್ದಾರೆ.
ಅಂತೆಯೇ ತರೂರ್ ಅವರ ಮಾತು ವಿವಾದವನ್ನು ಹುಟ್ಟುಹಾಕಿದ್ದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇಮ್ರಾನ್ ಖಾನ್ ಅವರಿಗೆ ಇತಿಹಾಸದಲ್ಲಿರುವ ನೈಜ, ಪ್ರಾಮಾಣಿಕ ಹಾಗೂ ದೂರಗಾಮಿ ಆಸಕ್ತಿಯನ್ನು ಶಶಿ ತರೂರ್ ಕೊಂಡಾಡಿದ್ದಾರೆ.
ಆದರೆ ಭಾರತದ ಗ್ರೇಟ್ ಹೀರೋ ಟಿಪ್ಪು ಸುಲ್ತಾನ ನನ್ನು ಆತನ ಮರಣ ವರ್ಷಾಚರಣೆ ಸಂದರ್ಭದಲ್ಲಿ ಪಾಕಿಸ್ಥಾನೀ ನಾಯಕನೋರ್ವ ಕೊಂಡಾಡುವಂತಾದದ್ದಕ್ಕೆ ತರೂರ್ ನಿರಾಶೆ ವ್ಯಕ್ತಪಡಿಸಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತೀಯ ಉಪಖಂಡದ ಇತಿಹಾಸವನ್ನು ಎಚ್ಚರಿಕೆಯಿಂದ ಓದುತ್ತಾರೆ ಎನ್ನುವುದು ಸಂತಸದ ವಿಷಯ ಎಂಬುದಾಗಿ ತರೂರ್ ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ