ಗಡಿ ನುಸುಳಲು 600 ಉಗ್ರರಿಗೆ ಪಾಕ್ ನೆರವು : ಗುಪ್ತಚರ ವರದಿ
Team Udayavani, Aug 3, 2018, 11:09 AM IST
ಹೊಸದಿಲ್ಲಿ : ಭಾರತ -ಪಾಕಿಸ್ಥಾನ ಗಡಿ ನಿಯಂತ್ರಣ ರೇಖೆಯ ಬಳಿ ವಿವಿಧ ಸ್ಥಳಗಳಲ್ಲಿ 600 ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಉಗ್ರರು ಗಡಿ ನುಸುಳಲು ಸಿದ್ಧವಾಗಿದ್ದಾರೆ ಎಂದು ಗುಪ್ತಚರ ವದಿಯೊಂದು ತಿಳಿಸಿದೆ.
ಉಗ್ರರಿಗೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ಪಾಕಿಸ್ಥಾನ್ ಬಾರ್ಡರ್ ಆಕ್ಷನ್ ಟೀಮ್ (BAT) ಸದಸ್ಯರು ,ಪಾಕ್ ಸೇನೆಯ ಸಂಪೂರ್ಣ ಸಹಕಾರವೂ ದೊರಕುತ್ತಿದೆ ಎಂದು ಗೃಹ ಇಲಾಖೆಗೆ ನೀಡಿದ ವರದಿಯಲ್ಲಿ ಹೇಳಿರುವುದಾಗಿ ವರದಿಯಾಗಿದೆ.
ಗುರೇಜ್ ಸೆಕ್ಟರ್ನಲ್ಲಿ 67 ಉಗ್ರರು, ಮಾಚೀಲ್ ಸೆಕ್ಟರ್ನಲ್ಲಿ 96 ಮಂದಿ ಉಗ್ರರು , ಕೆರಾನ್ ಸೆಕ್ಟರ್ನಲ್ಲಿ 117 ಉಗ್ರರು , ತಾಂಗ್ಧಾರ್ ಸೆಕ್ಟರ್ನಲ್ಲಿ 79 ಮಂದಿ ಉಗ್ರರು, ಉರಿ ಸೆಕ್ಟರ್ನಲ್ಲಿ 26 ಮಂದಿ ಉಗ್ರರು, ರಾಂಪುರ್ ಸೆಕ್ಟರ್ನಲ್ಲಿ 26 ಮಂದಿ ಉಗ್ರರು, ಪೂಂಚ್ ಸೆಕ್ಟರ್ನಲ್ಲಿ 43 ಮಂದಿ, ಕೃಷ್ಣಾ ಘಾಟಿ ಸೆಕ್ಟರ್ನಲ್ಲಿ 21 ಮಂದಿ, ಬಿಂಭೇರ್ ಘಾಲಿಯಲ್ಲಿ 40 ಮಂದಿ, ನೌಶೇರಾ ಸೆಕ್ಟರ್ನಲ್ಲಿ 6 ಉಗ್ರರು ಮತ್ತು ಸುಂದರ್ಬನಿ ಸೆಕ್ಟರ್ನಲ್ಲಿ 16 ಮಂದಿ ಉಗ್ರರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಗಡಿ ನುಸುಳಿ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದಾರೆ ಎಂದು ಅಂಕಿ ಅಂಶಗಳಿಂದ ಕೂಡಿದ ಗುಪ್ತಚರ ಇಲಾಖಾ ವರದಿ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 2015 ರಲ್ಲಿ 108 ಮಂದಿ, 2016 ರಲ್ಲಿ 150 ಮಂದಿ ಮತ್ತು 2017 ರ ಜುಲೈ ವರೆಗೆ 110 ಉಗ್ರರನ್ನು ಸೇನಾ ಪಡೆಗಳು ಹತ್ಯೆಗೈದಿರುವ ಕುರಿತು ಗೃಹ ಇಲಾಖೆ ವಿವರ ನೀಡಿತ್ತು.
ಇಮ್ರಾನ್ ಖಾನ್ ಅವರು ಪಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ವೇಳೆ, ಭಾರತ -ಪಾಕ್ ಶಾಂತಿ ಮಾತುಕತೆಯ ಕುರಿತಾಗಿ ಚರ್ಚೆ ನಡೆಯುವ ವೇಳೆ ಇಷ್ಟೊಂದು ಪ್ರಮಾಣದ ಉಗ್ರರು ಗಡಿಯಲ್ಲಿ ದಾಳಿಗಾಗಿ ಸಜ್ಜಾಗಿರುವುದು ಪಾಕಿಸ್ಥಾನದಲ್ಲಿ ಉಗ್ರವಾದ ಆಳವಾಗಿ ಬೇರೂರಿರುವುದನ್ನು ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
MUST WATCH
ಹೊಸ ಸೇರ್ಪಡೆ
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !
Kolkata Raiders ಕೋಚ್ ಬಗ್ಗೆ ಆಟಗಾರ ಡೇವಿಡ್ ವೀಸ್ ಆರೋಪ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್