ಬಿಹಾರ ಶಾಲಾ ನೋಟ್ ಬುಕ್ನಲ್ಲಿ ಪಾಕ್ ಬಾಲಕಿಯ ಚಿತ್ರ: ತನಿಖೆ
Team Udayavani, May 5, 2018, 7:19 PM IST
ಪಟ್ನಾ : ಬಿಹಾರದ ಜಮೂಯಿ ಜಿಲ್ಲೆಯ “ಸ್ವಚ್ಚ ಜಮೂಯಿ ಸ್ವಸ್ಥ ಜಮೂಯಿ’ ಅಭಿಯಾನದ ಅಂಗವಾಗಿ ಮುದ್ರಿಸಲಾದ ಶಾಲಾ ಮಕ್ಕಳ ನೋಟ್ ಬುಕ್ನ ಮುಖಪುಟದಲ್ಲಿ “ಬ್ರಾಂಡ್ ಅಂಬಾಸಿಡರ್” ಆಗಿ ಪಾಕಿಸ್ಥಾನದ ಹುಡುಗಿಯ ಫೋಟೋ ಕಂಡುಬಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಯಾವುದೇ ಸಂಬಂಧಿತ ಸರಕಾರಿ ಅಧಿಕಾರಿಗಳ ಗಮನಕ್ಕೆ ಬಾರದೇ ಘಟಿಸಿರುವ ಈ ಪ್ರಮಾದವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತನಿಖೆಗೆ ಆದೇಶಿಸಿದ್ದಾರೆ.
ಪಟ್ನಾದ ಸೌರಭ್ ಎಂಟರ್ಪ್ರೈಸಸ್ ಪ್ರಿಂಟಿಂಗ್ ಪ್ರಸ್ನಿಂದ ಮುದ್ರಿತವಾಗಿರುವ “ಸ್ವಚ್ಚ ಜಮೂಯಿ ಸ್ವಸ್ಥ ಜಮೂಯಿ” ಅಭಿಯಾನದ ಸುಮಾರು 5,000 ನೋಟ್ ಬುಕ್ಗಳು ಜಮೂಯಿ ಜಿಲ್ಲೆಯ ವಿದ್ಯಾರ್ಥಿಗಳ ಕೈಸೇರಿವೆ; ಈ ನೋಟ್ ಬುಕ್ನ ಮುಖ ಪುಟದಲ್ಲಿ ಕಾಣಿಸುವ ಐದು ವರ್ಷ ಪ್ರಾಯದ ಪಾಕಿಸ್ಥಾನದ ಬಾಲಕಿಯು ಕುರ್ಚಿಯಲ್ಲಿ ಕುಳಿತುಕೊಂಡು ತನ್ನ ದೇಶದ ಧ್ವಜದ ನಕ್ಷೆಯನ್ನು ಬಿಡಿಸುತ್ತಿರುವುದು ಕಂಡು ಬರುತ್ತದೆ.
ವಾಸ್ತವವಾಗಿ ಈ ಫೋಟೋವನ್ನು ಯುನಿಸೆಫ್ ಪಾಕಿಸ್ಥಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಪ್ರಚಾರಾಭಿಯಾನದ ಅಂಗವಾಗಿ ಬಳಸಿಕೊಂಡಿತ್ತು. ಅದೇ ಫೋಟೋವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಕೌಶಲ್ ಕಿಶೋರ್ ಅವರ ಅನುಮತಿಯ ಪ್ರಕಾರ ಬಳಸಿಕೊಳ್ಳಲಾಗಿದೆ ಎಂದು ಸ್ವಚ್ಚ ಭಾರತ ಅಭಿಯಾನದ ಜಿಲ್ಲಾ ಸಂಚಾಲಕ ಸುಧೀರ್ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ