ಜಾಧವ್‌ ಅಪಹರಣಕ್ಕೆ ಉಗ್ರ ಮುಲ್ಲಾಗೆ ISIನಿಂದ ಕೋಟಿಗಟ್ಟಲೆ ಹಣ


Team Udayavani, Jan 19, 2018, 11:32 AM IST

Kulbhushan Jadhav1-700.jpg

ಹೊಸದಿಲ್ಲಿ : ಪಾಕ್‌ನಲ್ಲಿ ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯ ಎಸಗಿದ ಆರೋಪದ ಮೇಲೆ ಪಾಕ್‌ ಮಿಲಿಟರಿಯಿಂದ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟು ಪ್ರಕೃತ ಅಲ್ಲಿನ ಜೈಲಿನಲ್ಲಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರನ್ನು ಇರಾನಿನ ಚಾಬಹಾರ್‌ ಬಂದರಿನಿಂದ ಅಪಹರಿಸುವುದಕ್ಕಾಗಿ ಉಗ್ರ ಮುಲ್ಲಾ ಉಮರ್‌ ಬಲೂಚ್‌ ಇರಾನಿಗೆ ಪಾಕಿಸ್ಥಾನದ ಐಎಸ್‌ಐ ಕೋಟ್ಯಂತ ರೂ.ಗಳನ್ನು ನೀಡಿತ್ತು  ಎಂಬ ವಿಷಯವನ್ನು ಬಲೂಚ್‌ ಕಾರ್ಯಕರ್ತ ಮಾಮಾ ಕಾದಿರ್‌ ಬಹಿರಂಗಪಡಿಸಿದ್ದಾರೆ. 

ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಕಾದಿರ್‌ ಅವರು, ಪಾಕಿಸ್ಥಾನದ ಕುಪ್ರಸಿದ್ಧ ಬೇಹು ಸಂಸ್ಥೆ ಐಎಸ್‌ಐ ಜತೆ ನಂಟು ಹೊಂದಿರುವ ಮುಲ್ಲಾ ಉಮರ್‌, ಕುಲಭೂಷಣ್‌ ಜಾಧವ್‌ ಅವರನ್ನು ಇರಾನಿನ ಚಾಬಹಾರ್‌ ಬಂದರಿನಲ್ಲಿ ಅಪಹರಿಸಿ ಪಾಕ್‌ ಐಎಸ್‌ಐ ವಶಕ್ಕೆ ಒಪ್ಪಿಸಿ ಕೋಟ್ಯಂತರ ರೂಪಾಯಿ ಪಡೆದುಕೊಂಡಿದ್ದಾನೆ ಎಂದು ಹೇಳಿದರು. 

ಕಾದಿರ್‌ ಬಲೂಚ್‌ ಅವರು “ವಾಯ್ಸ ಫಾರ್‌ ಮಿಸ್ಸಿಂಗ್‌ ಬಲೂಚ್‌’ ಎಂಬ ಸಂಘಟನೆಯ ಉಪಾಧ್ಯಕ್ಷರಾಗಿದ್ದಾರೆ. ಜಾಧವ್‌ ಅವರ ಅಪಹರಣಕ್ಕೆ ಸಾಕ್ಷಿಯಾದ ತನ್ನ ಸಂಘಟನೆಯ ಓರ್ವ ಕಾರ್ಯಕರ್ತನಿಂದ ತನಗೆ ಈ ವಿಷಯ ತಿಳಿಯಿತೆಂದು ಕಾದಿರ್‌ ಹೇಳಿದರು. 

ಜಾಧವ್‌ ಅವರನ್ನು ಚಾಬಹಾರ್‌ ಬಂದರಿನಲ್ಲಿ ಅಪಹರಿಸಿದ್ದ ಉಗ್ರ ಮುಲ್ಲಾ ಉಮರ್‌ ಇರಾನಿ ಬಲೂಚಿಸ್ಥಾನದಲ್ಲಿ ಐಎಸ್‌ಐ ಏಜಂಟ್‌ ಆಗಿ ಕೆಲಸಮಾಡುತ್ತಾನೆ. ಪಾಕ್‌ ಸರ್ವಾಧಿಕಾರಿ ಆಳ್ವಿಕೆ ವಿರುದ್ಧ ಹೋರಾಡಿದ ಅನೇಕ ಬಲೂಚಿಗಳ ಅಪಹರಣಕ್ಕೆ ಇವನೇ ಕಾರಣನಾಗಿದ್ದಾನೆ ಎಂದು ಕಾದಿರ್‌ ಹೇಳಿದರು. 

ಇರಾನ್‌ನ ಚಾಬಹಾರ್‌ ನಲ್ಲಿ ಅಪಹರಿಸಲ್ಪಟ್ಟ ಜಾಧವ್‌ ಅವರನ್ನು ಅನಂತರ ಇರಾನ್‌ – ಬಲೂಚಿಸ್ಥಾನ ಗಡಿ ಪಟ್ಟಣವಾಗಿರುವ ಮಾಷೆRಲ್‌ಗೆ ಒಯ್ಯಲಾಗಿ ಅಲ್ಲಿಂದ ಮುಂದೆ ಕ್ಟೆಟ್ಟಾಗೆ ಮತ್ತು ಆ ಬಳಿಕ ಇಸ್ಲಾಮಾಬಾದ್‌ಗೆ ಒಯ್ದು  ಅಲ್ಲಿ  ಪಾಕ್‌ ಐಎಸ್‌ಐ ಗೆ ಒಪ್ಪಿಸಲಾಯಿತು ಎಂದು ಕಾದಿರ್‌ ಹೇಳಿದರು. 

ಟಾಪ್ ನ್ಯೂಸ್

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.