4 ಸಾವಿರ ಉಗ್ರರಿಗೆ ಒಳ್ಳೆಯವರ ಪಟ್ಟ !
ಪಾಕ್ ಆಟ ಬಯಲು ಮಾಡಿದ ಭಾರತ
Team Udayavani, Sep 29, 2020, 5:45 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಜಗತ್ತು ಕೊರೊನಾ ಕರಾಳತೆಗೆ ಸಿಲುಕಿ ನರಳುತ್ತಿದ್ದರೆ ಪಾಕಿಸ್ಥಾನ ಮಾತ್ರ ತಾನೇ ಸಾಕಿ ಬೆಳೆಸಿದ ಉಗ್ರರಿಗೆ “ಒಳ್ಳೆಯವರ’ ಪಟ್ಟ ಕಟ್ಟುವುದರಲ್ಲಿ ನಿರತವಾಗಿತ್ತು!
ಇದು ವಿಶ್ವದ ಮುಂದೆ ಭಾರತ ಬಯಲು ಮಾಡಿದ ಪಾಕ್ ಬಗೆಗಿನ ಕರಾಳ ಸತ್ಯ. ವಿಶ್ವಸಂಸ್ಥೆಯಲ್ಲಿರುವ ಫಸ್ಟ್ ಸೆಕ್ರೆಟರಿ ಪವನ್ ಬಢೆ ಅವರು ಪಾಕಿಸ್ಥಾನದ ಬೆವರಿಳಿಸಿದ್ದಾರೆ. ಕೊರೊನಾ ಸೋಂಕಿನ ಕಾಲದಲ್ಲಿ ಇಡೀ ಜಗತ್ತು ಇದರಿಂದ ಪಾರಾಗುವ ಬಗ್ಗೆ ಚಿಂತನೆ ನಡೆಸುತ್ತಿತ್ತು. ಆದರೆ ಪಾಕ್ ಮಾತ್ರ ತನ್ನಲ್ಲಿರುವ ಉಗ್ರರ ಸಂಖ್ಯೆಯನ್ನು ಕುತಂತ್ರದಿಂದ ಕಡಿಮೆ ಮಾಡುತ್ತಿತ್ತು. ಈ ಸಂದರ್ಭದಲ್ಲಿ ಅದು ಸುಮಾರು 4 ಸಾವಿರ ಉಗ್ರರನ್ನು “ಭಯೋತ್ಪಾದಕರ ಪಟ್ಟಿ’ಯಿಂದ ತೆಗೆದುಹಾಕಿದೆ ಎಂದು ಪವನ್ ಹೇಳಿದ್ದಾರೆ.
ಇಡೀ ಜಗತ್ತಿಗೇ ಪಾಕ್ನ ಉಗ್ರ ವಾತ್ಸಲ್ಯದ ಬಗ್ಗೆ ಅರಿವಿದೆ. ಹೀಗಾಗಿಯೇ ಎಫ್ಎಟಿಎಫ್ನಲ್ಲಿ ದೇಶ ವನ್ನು ಕಪ್ಪುಪಟ್ಟಿಗೆ ಸೇರಿಸಿಬಿಟ್ಟರೆ ಎಂಬ ಆತಂಕ ಪಾಕ್ ನಾಯಕರಿಗೆ ಇದೆ. ಅಕ್ಟೋಬರ್ನಲ್ಲಿ ಎಫ್ಎಟಿಎಫ್ ಸಭೆ ನಡೆಯಲಿದ್ದು, ಇಂಥ ಭಯದಲ್ಲಿ ಯಾರಿಗೂ ಅರಿವು ಬಾರದಂತೆ ಪಾಕ್ ತನ್ನಲ್ಲಿರುವ ಉಗ್ರರ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಬಢೆ ಆರೋಪಿಸಿದ್ದಾರೆ.
ಪಿಒಕೆ ಪರಿಸ್ಥಿತಿ ಬದಲಾವಣೆ
ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಪಾಕ್ ಕಿರುಕುಳ ಇನ್ನಷ್ಟು ಹೆಚ್ಚಾಗಿದೆ. ಅಲ್ಲಿರುವ ಸ್ಥಳೀಯರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪ್ರತೀ ನಾಲ್ವರಲ್ಲಿ ಒಬ್ಬರು ಮಾತ್ರ ಸ್ಥಳೀಯರಿದ್ದಾರೆ. ಬೇರೆ ಕಡೆಯಿಂದ ಅಲ್ಲಿಗೆ ಜನರನ್ನು ಕರೆತರಲಾಗುತ್ತಿದೆ.
ಭಾರತದಲ್ಲಿರುವ ಅಲ್ಪಸಂಖ್ಯಾಕರ ಬಗ್ಗೆ ಮಾತನಾಡುವುದಕ್ಕೆ ಮುನ್ನ ಪಾಕ್ ತನ್ನಲ್ಲಿರುವ ಅಲ್ಪಸಂಖ್ಯಾಕರ ಸ್ಥಿತಿಗತಿಯೇನು ಎಂಬುದನ್ನು ಅರಿತುಕೊಳ್ಳಬೇಕು. ಪಾಕ್ನಲ್ಲಿ ಅಹಮದೀಯರು, ಕ್ರೈಸ್ತರು, ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಪವನ್ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ