ಸಯೀದ್ ಜತೆ ತನ್ನ ರಾಯಭಾರಿ: ಭಾರತಕ್ಕೆ ಪ್ಯಾಲೆಸ್ತೀನ್ ವಿಷಾದ
Team Udayavani, Dec 30, 2017, 7:05 PM IST
ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ಈಚೆಗೆ ಮುಂಬಯಿ ಮೇಲಿನ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್ ಉದ್ ದಾವಾ ನಿಷೇಧಿತ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಏರ್ಪಡಿಸಿದ್ದ ರಾಲಿಯಲ್ಲಿ ಪ್ಯಾಲೆಸ್ತೀನ್ ರಾಯಭಾರಿ ಉಪಸ್ಥಿತರಿದ್ದುದನ್ನು ಭಾರತ ತೀವ್ರವಾಗಿ ಖಂಡಿಸಿದ ಬಳಿಕ ಪ್ಯಾಲೆಸ್ತೀನ್ ಇಂದು ಶನಿವಾರ ಆಳವಾದ ವಿಷಾದವನ್ನು ವ್ಯಕ್ತಪಡಿಸಿ, ಪಾಕ್ನಲ್ಲಿನ ತನ್ನ ರಾಯಭಾರಿಯನ್ನು ವಾಪಾಸ್ ಕರೆಸಿಕೊಂಡಿದೆ.
ವಿದೇಶ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಹೊರಡಿಸಿರುವ ಅಧಿಕೃತ ಹೇಳಿಕೆಯಲ್ಲಿ “ಉಗ್ರ ಹಫೀಜ್ ಸಯೀದ್ ಏರ್ಪಡಿಸಿದ್ದ ರಾಲಿಯಲ್ಲಿ ತನ್ನ ರಾಯಭಾರಿ ಉಪಸ್ಥಿತರಿದ್ದರೆಂಬ ವಿಷಯದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿ, ತಾನಿದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಪ್ಯಾಲೇಸ್ತೀನ್ ಭಾರತ ಸರಕಾರಕ್ಕೆ ಭರವಸೆ ನೀಡಿದೆ’ ಎಂದು ತಿಳಿಸಿದೆ.
ಅತ್ಯಂತ ಕಠಿನ ಪದಗಳನ್ನು ಒಳಗೊಂಡ ಖಂಡನಾ ಪತ್ರದಲ್ಲಿ ಭಾರತ ಪ್ಯಾಲೆಸ್ತೀನ್ ಸರಕಾರಕ್ಕೆ “ಹಫೀಜ್ ಸಯೀದ್ ವಿಶ್ವಸಂಸ್ಥೆಯಿಂದ ಉಗ್ರನೆಂದು ಪರಿಗಣಿನಾಗಿರುವ ವ್ಯಕ್ತಿಯಾಗಿದ್ದು ಆತನೊಂದಿಗೆ ಪ್ಯಾಲೆಸ್ತೀನ್ ರಾಯಭಾರಿ ಸಖ್ಯ ಹೊಂದುವುದು ಎಷ್ಟು ಮಾತ್ರಕ್ಕೂ ನಮಗೆ ಒಪ್ಪಿತವಾದುದಲ್ಲ’ ಎಂದು ಹೇಳಿದೆ.
ಪಾಕಿಸ್ಥಾನದಲ್ಲಿ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಏರ್ಪಡಿಸಿದ ರಾಲಿಯಲ್ಲಿ ಆತನೊಂದಿಗೆ ಪ್ಯಾಲೆಸ್ತೀನ್ ರಾಯಭಾರಿ ವೇದಿಕೆ ಹಂಚಿಕೊಂಡ ಫೋಟೋಗಳು ಬಹಿರಂಗವಾಗುತ್ತಲೇ ಭಾರತ ತನ್ನ ತೀವ್ರ ಆಕ್ಷೇಪ, ಅಸಮಾಧಾನಗಳನ್ನು ಅತ್ಯಂತ ನಿಷ್ಠುರ ಪದಗಳಲ್ಲಿ ಪ್ಯಾಲೆಸ್ತೀನ್ ಸರಕಾರಕ್ಕೆ ಮುಲಾಜಿಲ್ಲದೆ ತಿಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ