ಮಹಾರಾಷ್ಟ್ರ : 2 ವ್ಯಾಗನ್ಗಳಿಗೆ ಬೆಂಕಿ: 12 ರೈಲುಗಳ ಸಂಚಾರ ರದ್ದು
Team Udayavani, Nov 9, 2018, 11:20 AM IST
ಮುಂಬಯಿ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾಣು ರೋಡ್ ಸ್ಟೇಶನ್ ಸಮೀಪ ನಿನ್ನೆ ಗುರುವಾರ ತಡ ರಾತ್ರಿ ಗೂಡ್ಸ್ ರೈಲೊಂದರ ಎರಡು ವ್ಯಾಗನ್ಗಳಲ್ಲಿ ಬೆಂಕಿ ಉಂಟಾದ ಕಾರಣ ಕನಿಷ್ಠ 12 ರೈಲುಗಳನ್ನು ರದ್ದು ಪಡಿಸಲಾಯಿತು.
ದಹಾಣು ರೋಡ್ ಮತ್ತು ವನಗಾಂವ್ ರೈಲು ನಿಲ್ದಾಣಗಳ ನಡುವೆ ನಿನ್ನೆ ಗುರುವಾರ ತಡರಾತ್ರಿ ಈ ಅವಘಡ ಸಂಭವಿಸಿತು ಎಂದು ಪೊಲೀಸ್ ಅಧಿಕಾರಿಗಳ ತಿಳಿಸಿದ್ದಾರೆ.
ಬೆಂಕಿ ಅವಘಡದ ಸುದ್ದಿ ತಿಳಿದೊಡನೆಯೇ ಅಗ್ನಿ ಶಾಮಕ ದಳ, ರೈಲ್ವೆ ಪೊಲೀಸ್ ದಳ (ಆರ್ಪಿಎಫ್) ಮತ್ತು ಸರಕಾರಿ ರೈಲ್ವೇ ಪೊಲೀಸ್ ದಳ (ಜಿಆರ್ಪಿ) ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡು ಇಂದು ಶುಕ್ರವಾರ ನಸುಕಿನ 2 ಗಂಟೆಯ ವೇಳಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದವು.
ರೈಲ್ವೇ ವ್ಯಾಗನ್ಗಳಿಗೆ ಹೊತ್ತಿಕೊಂಡ ಬೆಂಕಿಯು ಮೇಲ್ಗಡೆ ವಿದ್ಯುತ್ ವಯರ್ಗಳಿಗೆ ತಗುಲಿ ಅವು ಸುಟ್ಟು ಕರಗಿ ಹೋದ ಕಾರಣ ದೂರ ಸಂಚಾರದ ಸುಮಾರು 10 ರೈಲುಗಳನ್ನು ತಡೆಹಿಡಿಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ಲೈನ್ಗಳಲ್ಲಿ ಮುಂಬಯಿ ಕಡೆಗೆ ಸಂಚರಿಸುವ ರೈಲುಗಳ ಓಡಾಟ ತೀವ್ರವಾಗಿ ಬಾಧಿತವಾದವು; ನಸುಕಿ.1.35ರ ವೇಳೆಗೆ ಡೌನ್ ಲೈನ್ಗಳನ್ನು ತೆರವುಗೊಳಿಸಲಾಯಿತಾದರೂ ರೈಲುಗಳ ವೇಗವನ್ನು ನಿರ್ಬಂಧಿಸಲಾಯಿತು ಎಂದು ವೆಸ್ಟರ್ನ್ ರೈಲ್ವೆ ಪಿಆರ್ಓ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
MUST WATCH
ಹೊಸ ಸೇರ್ಪಡೆ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ