60 ಹಳೆ ಕಾನೂನು ರದ್ದು ಮಾಡುವ ಮಸೂದೆ ಸಂಸತ್ನಲ್ಲಿ ಮಂಡನೆ
ಕಡಲ್ಗಳ್ಳತನ ನಿಗ್ರಹ ಮಸೂದೆ ಗೆ ಅಸ್ತು
Team Udayavani, Dec 20, 2022, 6:50 AM IST
ಹೊಸದಿಲ್ಲಿ: ಕಡಲ್ಗಳ್ಳತನಕ್ಕೆ ಸಂಬಂಧಿಸಿದ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ಮತ್ತು ಮರಣದಂಡನೆ ವಿಧಿಸಲು ಅವಕಾಶ ಇರುವ ಮಸೂದೆ ಲೋಕಸಭೆಯಲ್ಲಿ ಸೋಮವಾರ ಅಂಗೀಕಾರವಾಗಿದೆ.
ಕಡಲ್ಗಳ್ಳತನ ನಿಗ್ರಹ ಮಸೂದೆಯನ್ನು ಲೋಕಸಭೆ ಸ್ಪೀಕರ್ ಧ್ವನಿ ಮತಕ್ಕೆ ಹಾಕಿದ್ದು, ಅದು ಅಂಗೀಕಾರವಾಗಿದೆ. “ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ಶಿಕ್ಷೆಯಾಗಬೇಕು ಎಂಬ ಸುಪ್ರೀಂ ಕೋರ್ಟ್ ಅವಲೋಕನವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮರಣದಂಡನೆ ವಿಧಿಸುವ ದೃಷ್ಟಿಯಿಂದ ಅನೇಕ ರಾಷ್ಟ್ರಗಳು ಆರೋಪಿ ಗಳನ್ನು ಹಸ್ತಾಂತರಿಸುವುದಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಜೀವಾವಧಿ ಶಿಕ್ಷೆಯ ಆಯ್ಕೆಯನ್ನು ಸರಕಾರ ಸೇರಿಸಿದೆ,’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು.
ಕಡಲ್ಗಳ್ಳತನ ನಿಗ್ರಹ ಮಸೂದೆಯನ್ನು 2019ರಲ್ಲಿ ಪ್ರಸ್ತಾವಿಸಲಾಗಿತ್ತು. ಸಂಸದೀಯ ಸಮಿತಿಯ ಪರಿಶೀಲನೆಗೆ ಒಳಗಾದ ಅನಂತರ ಸರಕಾರವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿಗಳನ್ನು ತಂದಿತ್ತು.
10.09 ಲಕ್ಷ ಕೋಟಿ ಸಾಲ ಮನ್ನಾ: ಕಳೆದ 5 ಹಣಕಾಸು ವರ್ಷಗಳಲ್ಲಿ ಷೆಡ್ನೂಲ್ಡ್ ವಾಣಿಜ್ಯ ಬ್ಯಾಂಕ್ಗಳು ಒಟ್ಟು 10,09,511 ಕೋಟಿ ರೂ. ಸಾಲ ಮನ್ನಾ ಮಾಡಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಜತೆಗೆ ಸಾಲಗಾರರಿಂದ ಬಾಕಿ ಮೊತ್ತವನ್ನು ವಸೂಲು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದೂ ತಿಳಿಸಿದ್ದಾರೆ.
ಉಕ್ಕು ಉತ್ಪಾದನೆ ದಾಖಲೆ: ಭಾರತದ ಉಕ್ಕು ಉತ್ಪಾದನೆಯು ಐತಿಹಾಸಿಕ ಮಟ್ಟಕ್ಕೇರಿದ್ದು, ಪ್ರತೀ ವರ್ಷ 120 ದಶಲಕ್ಷ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಈ ಮೂಲಕ ಭಾರತವು ಜಗತ್ತಿನಲ್ಲೇ 2ನೇ ಅತೀದೊಡ್ಡ ಉಕ್ಕು ಉತ್ಪಾದಕ ದೇಶ ಎಂಬ ಹೆಗ್ಗಳಿಕೆ ಗಳಿಸಿದೆ ಎಂದು ರಾಜ್ಯಸಭೆಗೆ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಮಾಹಿತಿ ನೀಡಿದ್ದಾರೆ.
ಹಳೆ ಕಾನೂನು ರದ್ದು?
137 ವರ್ಷಗಳ ಹಿಂದೆ ಜಾರಿಯಾದ ಒಂದು ಕಾನೂನು ಸಹಿತ ಒಟ್ಟಾರೆ 60ರಷ್ಟು ಹಳೆಯ ಕಾನೂನುಗಳನ್ನು ರದ್ದು ಮಾಡುವಂಥ ಮಸೂ ದೆ ಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇದು ಅಂಗೀಕಾರಗೊಂಡರೆ 1885ರ ಭೂಸ್ವಾಧೀನ(ಗಣಿ) ಕಾಯ್ದೆ, ಟೆಲಿಗ್ರಾಫ್ ವಯರ್ಸ್ ಕಾಯ್ದೆ 1950 ಸಹಿತ 60 ಕಾನೂನುಗಳು ರದ್ದಾಗಲಿವೆ.
ಕೆಲವು ಎಡಪಂಥೀಯ ಹೋರಾಟ ಗಾರರು ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ದೇಶದ ಸಾಂಸ್ಕೃತಿಕ ಮೌಲ್ಯಕ್ಕೆ ವಿರುದ್ಧವಾದ ಆದೇಶವನ್ನು ನ್ಯಾಯಾಂಗವು ನೀಡಬಾರದು. ಇದು ಸಾಮಾಜಿಕ ಮಹತ್ವದ ಸಂಗತಿಯಾಗಿದ್ದು ಇಬ್ಬರು ಜಡ್ಜ್ಗಳು ಕುಳಿತು ನಿರ್ಧರಿಸುವ ವಿಚಾರವಲ್ಲ.
-ಸುಶೀಲ್ ಮೋದಿ, ಬಿಜೆಪಿ ರಾಜ್ಯಸಭೆ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ