ರೈಲು ಪ್ರಯಾಣಿಕನ ಸಕಾಲಿಕ ಟ್ವೀಟ್: 26 ಬಾಲಕಿಯರ ರಕ್ಷಣೆ
Team Udayavani, Jul 6, 2018, 7:29 PM IST
ಹೊಸದಿಲ್ಲಿ : ರೈಲು ಪ್ರಯಾಣಿಕರೊಬ್ಬರು ಟ್ಟಿಟರ್ ಮೂಲಕ ಜಾಗೃತಗೊಳಿಸಿದ ಪರಿಣಾಮವಾಗಿ ಜಿಆರ್ಪಿ ಮತ್ತು ಆರ್ಪಿಎಫ್ ಸಿಬಂದಿಗಳು ಮುಜಫರಪುರ – ಬಾಂದ್ರಾ ಅವಧ್ ಎಕ್ಸ್ಪ್ರೆಸ್ ರೈಲಿನಿಂದ ಕನಿಷ್ಠ 26 ಮಂದಿ ಬಾಲಕಿಯರು ಕಳ್ಳಸಾಗಣೆಗೆ ಗುರಿಯಾಗುವುದನ್ನು ತಪ್ಪಿಸಿ ಅವರನ್ನು ರಕ್ಷಿಸಿರುವ ಘಟನೆ ವರದಿಯಾಗಿದೆ.
ನಿನ್ನೆ ಗುರುವಾರ ಜುಲೈ 5ರಂದು ರೈಲು ಪ್ರಯಾಣಿಕರೋರ್ವರು “ನಾನು ಎಸ್5 ಕೋಚ್ನಲ್ಲಿ ಪ್ರಯಾಣಿಸುತ್ತಿದ್ದೇನೆ; 26 ಬಾಲಕಿಯರು ಅಸಹಾಯಕರಾಗಿ ಅಳುತ್ತಿರುವುದನ್ನು ಕಾಣುತ್ತಿದ್ದೇನೆ” ಎಂದು ರೈಲಿನ ರಕ್ಷಣಾ ಅಧಿಕಾರಿಗಳಿಗೆ ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ತತ್ಕ್ಷಣ ಸ್ಪಂದಿಸಿದ ವಾರಾಣಸಿ ಮತ್ತು ಲಕ್ನೋದಲ್ಲಿನ ಅಧಿಕಾರಿಗಳು ಕ್ರಿಯಾಶೀಲರಾಗಿ ಅರ್ಧ ತಾಸಿನೊಳಗೆ ತನಿಖೆ ನಡೆಸಿದರು. ಕಪ್ತಾನ್ಗಂಜ್ ನಲ್ಲಿ ರೈಲು ಹತ್ತಿದ ನಾಗರಿಕ ಉಡುಪಿನಲ್ಲಿದ್ದ ಇಬ್ಬರು ಆರ್ಪಿಎಫ್ ಜವಾನರು ಬಾಲಕಿಯರನ್ನು ರಕ್ಷಿಸಿ ಗೋರಖ್ಪುರಕ್ಕೆ ಕರೆ ತಂದರು.
26 ಮಂದಿ ಬಾಲಕಿಯರೊಂದಿಗೆ 22 ಮತ್ತು 55 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳಿದ್ದರು. ಇವರೆಲ್ಲರೂ ಬಿಹಾರದ ಚಂಪಾರಣ್ ನವರು. ಹುಡುಗಿಯರನ್ನು ನರ್ಕತಿಕ್ಯಾಗಂಜ್ ನಿಂದ ಈದ್ಗಾ ಕ್ಕೆ ಒಯ್ಯಲಾಗುತ್ತಿತ್ತು. ಹುಡುಗಿಯರನ್ನು ಪ್ರಶ್ನಿಸಿದಾಗ ಅವರಿಂದ ಯಾವುದೇ ರೀತಿಯ ಸರಿಯಾದ ಉತ್ತರ ಬರಲಿಲ್ಲ; ಆದ ಕಾರಣ ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಲಾಯಿತು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ