ಬುರಾರಿ ಮನೆಗೆ ಬಾಡಿಗೆಗೆ ಬಂದ ಪೆಥಾಲಜಿಸ್ಟ್
Team Udayavani, Dec 29, 2019, 12:28 AM IST
ಹೊಸದಿಲ್ಲಿ: 2018ರ ಜುಲೈನಲ್ಲಿ ದಿಲ್ಲಿಯ ಬುರಾರಿ ಪ್ರಾಂತ್ಯದಲ್ಲಿ ಒಂದೇ ಕುಟುಂಬದ 11 ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಗೆ, ರೋಗಶಾಸ್ತ್ರಜ್ಞರಾದ ಮೋಹನ್ ಸಿಂಗ್ ಕಶ್ಯಪ್ ಎಂಬವರು ಬಾಡಿಗೆದಾರರರಾಗಿ ಕಾಲಿಡುತ್ತಿದ್ದಾರೆ. ರವಿವಾರ ಆ ಮನೆಯಲ್ಲಿ ಹೋಮ- ಹವನಗಳನ್ನು ಮಾಡಿ ಗೃಹ ಪ್ರವೇಶ ಮಾಡುವುದಾಗಿ ಅವರು ತಿಳಿಸಿದ್ದಾರೆ. 2018ರಲ್ಲಿ ಈ ಮನೆಯ 11 ಸದಸ್ಯರು ಮೋಕ್ಷಕ್ಕಾಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದು ದೇಶಾ ದ್ಯಂತ ಸುದ್ದಿಯಾಗಿತ್ತು.
ಆ ಪ್ರಕರಣ ಬೆಳಕಿಗೆ ಬಂದ ಅನಂತರ ಮನೆ ಯನ್ನು ಚಂದಾವತ್ ಕುಟುಂಬದ ಹತ್ತಿರದ ಸಂಬಂಧಿ ದಿನೇಶ್ ಚಂದಾವತ್ ಎಂಬವರು ಸುಪರ್ದಿಗೆ ಪಡೆದಿದ್ದರು. ಆದರೆ, ಆಗಿನಿಂದ ಈ ಮನೆಗೆ ಯಾರೂ ಬಾಡಿಗೆಗೆ ಬಂದಿರಲಿಲ್ಲ. ಈಗ ದಿನೇಶ್ ಅವರಿಂದಲೇ ಆ ಮನೆಯ ನೆಲ ಅಂತಸ್ತು ಹಾಗೂ ಮೊದಲ ಮಹಡಿಯನ್ನು ಕಶ್ಯಪ್ ಬಾಡಿಗೆ ಪಡೆದಿದ್ದಾರೆ. ನೆಲ ಅಂತಸ್ತಿನಲ್ಲಿ ಪೆಥಾಲಜಿ ಲ್ಯಾಬ್ ಮಾಡಿ, ಮೊದಲ ಅಂತಸ್ತಿನಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿರಲು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ