ಪೂಜಾ ಪೆಂಡಾಲಲ್ಲಿ ತೇಜಸ್ವಿ ರಾಜ್ಯಾಭೀಷೇಕ ನಡೆಸಿದ ಶತ್ರುಘ್ನ ಸಿನ್ಹಾ
Team Udayavani, Oct 17, 2018, 3:44 PM IST
ಪಟ್ನಾ : ಅತೃಪ್ತ ಬಿಜೆಪಿ ನಾಯಕ, ಮಾಜಿ ಬಾಲಿವುಡ್ ನಟ, ಸಂಸದ ಶತ್ರುಘ್ನ ಸಿನ್ಹಾ ಅವರಿಂದು ಪಟ್ನಾದಲ್ಲಿನ ದುರ್ಗಾ ಪೂಜಾ ಪೆಂಡಾಲಿಗೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಜತೆಗೂಡಿ ಭೇಟಿ ನೀಡಿ ತೇಜಸ್ವಿಯ ಹಣೆಯಲ್ಲಿ ತಿಲಕ ಇಡುವ ಮೂಲಕ ಆತನ ‘ರಾಜ್ಯಾಭಿಷೇಕ’ ವನ್ನು ನೆರವೇರಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಸದಾ ಟೀಕಾ ಪ್ರಹಾರ ನಡೆಸುತ್ತಿರುವ ಶತ್ರುಘ್ನ ಸಿನ್ಹಾ ಅವರು ಆರ್ಜೆಡಿ ಉತ್ತರಾಧಿಕಾರಿ ತೇಜಸ್ವಿ ಜತೆಗೆ ಡಾಕ್ ಬಂಗ್ಲೆ ರಸ್ತೆಯಲ್ಲಿನ ಪೂಜಾ ಪೆಂಡಾಲ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು.
ಪೆಂಡಾಲ್ನಿಂದ ಮರಳುವಾಗ ಶತ್ರುಘ್ನ ಸಿನ್ಹಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ತೇಜಸ್ವಿ ಸಣ್ಣ ಪ್ರಾಯದವನಿದ್ದು ಆತನಲ್ಲಿ ನಾಯಕತ್ವ ಗುಣಗಳಿವೆ. ಆತನಿಗೆ ನನ್ನ ಶುಭ ಹಾರೈಕೆಗಳು. ಇವತ್ತು ಆತನ ರಾಜ್ಯಾಭಿಷೇಕವನ್ನು ನಾನು ನಡೆಸಿದ್ದೇನೆ; ಬಿಹಾರವನ್ನು ಆತ ಸಮರ್ಥವಾಗಿ ಮುನ್ನಡೆಸುವನೆಂಬ ವಿಶ್ವಾಸ ನನಗಿದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶತ್ರುಘ್ನ ಸಿನ್ಹಾ ಅವರು ಹಳೇ ಹಿಂದಿ ಸಿನೆಮಾದ “ಅಬ್ ತುಮ್ಹಾರೆ ಹವಾಲೆ ಎ ವತನ್ ಸಾಥಿಯೋಂ’ ಎಂಬ ಹಾಡನ್ನು ಗುನುಗಿದರು.
29ರ ಹರೆಯದ ತೇಜಸ್ವಿ ಅವರು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರನಾಗಿದ್ದು ಬಿಹಾರ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ