ಮತ್ತೆ 10 ಕೋಟಿ ಪಾವತಿಸಿ
Team Udayavani, May 8, 2019, 6:00 AM IST
ಹೊಸದಿಲ್ಲಿ: ಏರ್ಸೆಲ್ ಮ್ಯಾಕ್ಸಿಸ್ ಹಗರಣದಲ್ಲಿ ಇ.ಡಿ. ಮತ್ತು ಸಿಬಿಐನಿಂದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಅಮೆರಿಕ, ಜರ್ಮನ್ ಮತ್ತು ಸ್ಪೇನ್ ದೇಶಗಳಗೆ ಈ ತಿಂಗಳು ಪ್ರಯಾಣ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಆದರೆ, ಅದಕ್ಕೂ ಮೊದಲು ಮತ್ತೆ 10 ಕೋಟಿ ರೂ. ಗಳ ಭದ್ರತಾ ಠೇವಣಿ ಇರಿಸುವಂತೆಯೂ ಆದೇಶಿಸಿದೆ. ಈ ಹಿಂದೆಯೂ 10 ಕೋಟಿ ರೂ. ಠೇವಣಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಇಡಲಾಗಿದೆಯಲ್ಲವೇ ಎಂದು ಕಾರ್ತಿ ಪರ ವಕೀಲರು ಕೇಳಿದಾಗ, ‘ಈಗ ಮತ್ತೆ 10 ಕೋಟಿ ರೂ. ಸಲ್ಲಿಸಲು ನಿಮಗೆ ತೊಂದರೆಯೇನೂ ಆಗಲಿಕ್ಕಿಲ್ಲ ಅಲ್ಲವೇ’ ಎಂದು ನ್ಯಾಯಪೀಠ ಮರುಪ್ರಶ್ನೆ ಹಾಕಿತು. ಕೊನೆಗೆ ಕಾರ್ತಿ ಪರ ವಕೀಲರು ಠೇವಣಿಯಿಡಲು ಒಪ್ಪಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?