ಪೆಹ್ಲು ಖಾನ್ ಪ್ರಕರಣ: ಚಾರ್ಜ್ಶೀಟ್ ದಾಖಲು
Team Udayavani, Jun 30, 2019, 5:06 AM IST
ಅಲ್ವಾರ್: ಹರ್ಯಾಣ ನಿವಾಸಿ ಪೆಹ್ಲು ಖಾನ್ ಎಂಬವರನ್ನು ರಾಜಸ್ಥಾನದ ಅಲ್ವಾರ್ನಲ್ಲಿ ಗೋರಕ್ಷಕರ ಗುಂಪೊಂದು ಥಳಿಸಿ, ಹತ್ಯೆಗೈದ ಪ್ರಕರಣ ಸಂಬಂಧ ಪೊಲೀಸರು ಶನಿವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಹತ್ಯೆಗೀಡಾದ ಪೆಹ್ಲು ಖಾನ್ ಅವರ ಇಬ್ಬರು ಪುತ್ರರ ಹೆಸರನ್ನು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದ್ದು, ಇವರು ಗೋವುಗಳ ಕಳ್ಳಸಾಗಣೆ ಮಾಡುತ್ತಿ ದ್ದರು ಎಂದು ಆರೋಪಿಸಲಾಗಿದೆ. ಚಾರ್ಜ್ಶೀಟ್ ಸಲ್ಲಿಕೆ ಸುದ್ದಿ ಹೊರಬೀಳುತ್ತಲೇ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖಂಡ ಒವೈಸಿ, ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್, ಸಂತ್ರಸ್ತರ ಕುಟುಂಬದ ವಿರುದ್ಧ ಆರೋಪಪಟ್ಟಿ ಸಲ್ಲಿಸಿ,ತಾನು ಬಿಜೆಪಿಯ ಇನ್ನೊಂದು ಮುಖ ಎಂಬುದನ್ನು ತೋರಿಸಿದೆ ಎಂದಿದ್ದಾರೆ.
ಮರುತನಿಖೆ?: ವಿವಾದದಿಂದ ದೂರ ಸರಿಯಲು ಯತ್ನಿಸಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ‘ಈ ಪ್ರಕರಣದ ತನಿಖೆ ನಡೆದಿರುವುದು ಬಿಜೆಪಿ ಆಡಳಿತಾವಧಿಯಲ್ಲಿ. ತನಿಖೆಯಲ್ಲಿ ಏನಾದರೂ ಲೋಪವಾಗಿದ್ದು ಕಂಡುಬಂದರೆ, ಮರುತನಿಖೆಗೆ ಆದೇಶಿಸುತ್ತೇವೆ’ ಎಂದಿದ್ದಾರೆ. ಇದೇ ವೇಳೆ, ಮಾತನಾಡಿರುವ ಪೆಹ್ಲು ಖಾನ್ ಕುಟುಂಬ, ನಾವು ನ್ಯಾಯವನ್ನು ನಿರೀಕ್ಷಿಸಿದ್ದೆವು. ಆದರೆ, ನಮ್ಮ ವಿರುದ್ಧವೇ ಆರೋಪ ಹೊರಿಸಲಾಗಿದೆ. ನಮ್ಮನ್ನೇಕೆ ಉಳಿಸಿದ್ದೀರಿ, ನಮ್ಮನ್ನೂ ಕೊಂದುಬಿಡಿ’ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…