ಮಾಲ್ಗಳಿಗೆ ಹೋಗಲ್ಲ, ಸಾರ್ವಜನಿಕ ಸಾರಿಗೆ ಬಳಸಲ್ಲ!
ಕೋವಿಡ್ ಪರಿಣಾಮ ಜನರ ಮನಃಸ್ಥಿತಿಯಲ್ಲಿ ಬದಲಾವಣೆ ; ವೆಲಾಸಿಟಿ ಎಂಆರ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ಫಲಿತಾಂಶ
Team Udayavani, May 18, 2020, 6:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತ ಕೋವಿಡ್ ಪೀಡೆಗೊಳಗಾಗಿದೆ. ಪರಿಣಾಮ ದೇಶದಲ್ಲಿ ದಿಗ್ಬಂಧನ ಜಾರಿಯಲ್ಲಿದೆ. ಇದು ಮುಗಿದ ಮೇಲೆ ದೇಶದ ಜನರ ಮನಸ್ಥಿತಿಯಲ್ಲಿ ಹಲವು ಬದಲಾವಣೆಗಳು ನಿರೀಕ್ಷಿತವಾಗಿವೆ. ವೆಲಾಸಿಟಿ ಎಂಆರ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾದ ಬದಲಾವಣೆಗಳು ಹೀಗಿವೆ.
ಸಾರ್ವಜನಿಕ ಸಾರಿಗೆ ಬೇಡ
ಲಾಕ್ಡೌನ್ ನಿಯಮಗಳು ಸಡಿಲಗೊಂಡ ನಂತರವೂ ಸಾರ್ವಜನಿಕ ಸಾರಿಗೆಯನ್ನು ನಾವು ಬಳಸುವುದಿಲ್ಲ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.70ರಷ್ಟು ಮಂದಿ ಹೇಳಿದ್ದಾರೆ.
ಶೇ.62ರಷ್ಟು ಮಂದಿ ಓಲಾ, ಉಬರ್ನಂತಹ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳನ್ನೂ ಬಳಸುವುದಿಲ್ಲ ಎಂದಿದ್ದಾರೆ. ಸಾರ್ವಜನಿಕ ಸಾರಿಗೆಯಿಂದ ದೂರ ಉಳಿಯುವ ಬಗ್ಗೆ ಬಹುತೇಕರು ದೃಢ ನಿರ್ಧಾರ ಮಾಡಿದ್ದಾರೆ.
ಮಾಲ್ಗಳಿಗೆ ಹೋಗುವುದಿಲ್ಲ
ಶಾಪಿಂಗ್, ಖರೀದಿ ಇತ್ಯಾದಿಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿರುವ ಅನೇಕ ಜನರಲ್ಲಿ ಶೇ.71ರಷ್ಟು ಜನ ಇನ್ನೂ ಕೆಲವು ದಿನ ಮಾಲ್ಗಳಿಗೆ, ಸೂಪರ್ ಮಾರ್ಕೆಟ್ಗಳಿಗೆ ಭೇಟಿ ನೀಡುವುದಿಲ್ಲ ಎಂದಿದ್ದಾರೆ. ಶೇ.80ರಷ್ಟು ಮಂದಿ ತಾವು ಇ-ಖರೀದಿ ಮೂಲಕ ಸಾಮಗ್ರಿಗಳನ್ನು ತರಿಸುವುದಾಗಿ ಹೇಳಿದ್ದಾರೆ.
ನಿರುದ್ಯೋಗ ಏರುತ್ತೆ
ನಿರುದ್ಯೋಗ ಪ್ರಮಾಣ ಜಾಸ್ತಿಯಾಗುತ್ತದೆ ಎಂಬ ಆತಂಕವನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.50ರಷ್ಟು ಮಂದಿ ವ್ಯಕ್ತಪಡಿಸಿದ್ದಾರೆ. ಇನ್ನು ಖಾಸಗಿ ವಲಯದಲ್ಲಿ ಉದ್ಯೋಗ ಅಭದ್ರತೆ ಹೆಚ್ಚಲಿದೆ ಎಂದು ಹೇಳಿದವರ ಪ್ರಮಾಣ ಶೇ.53ರಷ್ಟು.
ಆರೋಗ್ಯಸೇತು ಆ್ಯಪನ್ನು ಬಳಸಲು ಬಯಸಿದವರ ಸಂಖ್ಯೆ: 77%
ಸಿಗರೇಟು, ಮದ್ಯ ಸಿಗದಿರುವುದೇ ಒಳಿತು ಎಂದವರ ಪ್ರಮಾಣ: 80%
ನಿರ್ಬಂಧ ಮುಗಿದ ಮೇಲೆ ಅಂತರ್ಜಾಲ ಬ್ಯಾಂಕಿಂಗ್ ವ್ಯವಹಾರ ಶೇ.90ಕ್ಕೇರುವ ಸಾಧ್ಯತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ