ಪಾಕ್ ಮೇಲಿನ ದಾಳಿಗೆ ಸಿಂಗ್ ಸರಕಾರ ಒಪ್ಪಿರಲಿಲ್ಲ
Team Udayavani, Dec 29, 2019, 1:01 AM IST
ಮುಂಬಯಿ: 2008ರಲ್ಲಿ ಜರಗಿದ್ದ ಮುಂಬಯಿ ದಾಳಿಯ ಅನಂತರ ಪಾಕಿಸ್ಥಾನದ ಮೇಲೆ ದಾಳಿ ನಡೆಸಲು ಭಾರತೀಯ ವಾಯು ಪಡೆ (ಐಎಎಫ್) ಸಿದ್ಧವಾಗಿದ್ದರೂ ಅದಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರಕಾರ ಅವಕಾಶ ನೀಡಲಿಲ್ಲ ಎಂದು ಐಎಎಫ್ ಮುಖ್ಯಸ್ಥ ಬಿ.ಎಸ್. ಧನೋವಾ ಹೇಳಿದ್ದಾರೆ. ಮುಂಬಯಿನಲ್ಲಿರುವ ವೀರ ಮಾತಾ ಜೀಜಾಬಾಯಿ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, “”ಪಾಕಿಸ್ಥಾನದ ಯಾವ್ಯಾವ ಸ್ಥಳಗಳಲ್ಲಿ ಉಗ್ರರ ನೆಲೆಗಳಿವೆ ಎಂಬುದರ ಖಚಿತ ಮಾಹಿತಿ ವಾಯುಪಡೆಗೆ ಇತ್ತು. ಅವುಗಳ ಮೇಲೆ ದಾಳಿ ನಡೆಸುವ ಪ್ರಸ್ತಾವನೆಯನ್ನು ವಾಯುಪಡೆ ಸರಕಾರಕ್ಕೆ ಸಲ್ಲಿಸಿತ್ತು. ವಿದೇಶಿ ನೆಲಗಳ ಮೇಲೆ ದಾಳಿ ನಡೆಸುವುದು ರಾಜಕೀಯ ವಿಚಾರ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
ನೀವು ಬದುಕಿದ್ದಾಗಲೂ, ಸತ್ತಾಗಲೂ ಲೂಟಿ ಮಾಡುವುದೇ ಕಾಂಗ್ರೆಸ್ನ ಮಂತ್ರ: ಮೋದಿ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ