ಪ್ರವಾಹ ಪೀಡಿತ ಈಶಾನ್ಯ ರಾಜ್ಯಗಳಿಗೆ 2,350 ಕೋಟಿ ಮೋದಿ ಪ್ಯಾಕೇಜ್
Team Udayavani, Aug 1, 2017, 4:30 PM IST
ಗುವಾಹಟಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳವಾರ ಅಭೂತಪೂರ್ವ ಪ್ರವಾಹದಿಂದ ನಲುಗಿರುವ ಎಲ್ಲ ಈಶಾನ್ಯ ರಾಜ್ಯಗಳಿಗೆ ಒಟ್ಟು 2,350 ಕೋಟಿ ರೂ.ಗಳ ಪ್ಯಾಕೇಜ್ ಪ್ರಕಟಿಸಿದ್ದಾರೆ.
ಪ್ರವಾಹದಿಂದ ಉಂಟಾಗಿರುವ ನಾಶ, ನಷ್ಟವನ್ನು ಕಿರು ಮತ್ತು ದೀರ್ಘಾವಧಿ ನೆಲೆಯಲ್ಲಿ ನಿಭಾಯಿಸಲು ಈ ಪ್ಯಾಕೇಜ್ ಬಳಸಲಾಗುವುದು.
ಮೋದಿ ಅವರು ಇಂದು ಒಂದು ದಿನದ ಗುವಾಹಟಿ ಭೇಟಿಯಲ್ಲಿ ಇದ್ದಾರೆ. ಪ್ರವಾಹ ಪೀಡಿತ ಈಶಾನ್ಯ ರಾಜ್ಯಗಳಾಗಿರುವ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್ನ ಮುಖ್ಯಮಂತ್ರಿಗಳನ್ನು ಪ್ರಧಾನಿ ಮೋದಿ ಅವರಿಂದು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮತ್ತು ಪ್ರವಾಹ ಕುರಿತಾದ ತಾಜಾ ಮಾಹಿತಿಗಳನ್ನು ನೇರವಾಗಿ ಪಡೆದುಕೊಳ್ಳಲಿದ್ದಾರೆ.