ಬಾಂಧವ್ಯ ಗಟ್ಟಿಗೊಳಿಸಿದ ಅನೌಪಚಾರಿಕ ಭೇಟಿ

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಅದ್ಧೂರಿ ಸ್ವಾಗತ

Team Udayavani, Oct 12, 2019, 5:23 AM IST

d-52

ಚೆನ್ನೈ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಭಾರತ ಭೇಟಿ, ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಜತೆ ನಡೆದ ಅನೌಪಚಾರಿಕ ಮಾತು ಕತೆಯು ಭಾರತ ಮತ್ತು ಚೀನಾದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಪಾಕಿಸ್ತಾನದ ಕುತಂತ್ರಕ್ಕೆ ಬಲಿಯಾಗಿ ಚೀನಾವು ಪಾಕ್‌ ಪರ ನಿಲುವು ತಳೆದಿದ್ದ ಸಂದರ್ಭದಲ್ಲೇ ಈ ಭೇಟಿಗೆ ವೇದಿಕೆ ಕಲ್ಪಿಸಿರುವುದು ರಾಜತಾಂತ್ರಿಕ ಮಟ್ಟದಲ್ಲೂ ಭಾರತದ ಜಾಣ ನಡೆಗೆ ಸಾಕ್ಷಿಯಾಗಿದೆ.

ಶಿಥಿಲ ಸರೋವರಕ್ಕೆ ಮರುಜೀವ
ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಅವರ ಮಹಾಬಲಿಪುರಂ ಭೇಟಿಯು ಇಲ್ಲಿನ ಶಿಥಿಲಗೊಂಡಿದ್ದ ಸರೋವರಕ್ಕೆ ಜೀವ ನೀಡಿದೆ. ಅದು ಹೇಗೆ ಗೊತ್ತಾ? ಮೋದಿ-ಕ್ಸಿ ಭೇಟಿ ಹಿನ್ನೆಲೆಯಲ್ಲಿ ಇಡೀ ಮಹಾಬಲಿಪುರಂ ಅನ್ನು ಚೆಂದಗಾಣಿಸುವ ಪ್ರಕ್ರಿಯೆ ಕೆಲ ತಿಂಗಳ ಹಿಂದೆಯೇ ಆರಂಭವಾಗಿತ್ತು. ಅದರ ಭಾಗವಾಗಿ, ನಿರ್ಜೀವವಾಗಿದ್ದ ಕೊನೇರಿ ಸರೋವರಕ್ಕೆ ಜೀವ ತುಂಬಲಾಗಿದೆ. ಮಹಾಬಲಿಪುರಂ ಸ್ಮಾರಕದ ಪಕ್ಕದಲ್ಲೇ ಇರುವ ಈ ಕೆರೆಯಲ್ಲಿ ಹೂಳು, ಕಳೆಗಳು ತುಂಬಿದ ಪರಿಣಾಮ ಅಲ್ಲೊಂದು ಕೆರೆಯಿತ್ತು ಎಂಬುದೇ ಮರೆತುಹೋಗಿತ್ತು. ಆದರೆ, ಮೋದಿ-ಕ್ಸಿ ಭೇಟಿ ಹಿನ್ನೆಲೆಯಲ್ಲಿ ಎನ್‌ಜಿಒವೊಂದು ಈ ಜಲಮೂಲದ ಪುನಶ್ಚೇತನ ಕಾರ್ಯ ನಡೆಸಿದೆ.

ಸ್ವಾಗತಕ್ಕೆ 18 ಬಗೆಯ ತರಕಾರಿ
ಜಿನ್‌ಪಿಂಗ್‌ ಅವರಿಗೆ ಅದ್ಧೂರಿ ಸ್ವಾಗತ ನೀಡುವ ಸಲುವಾಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಮಹಾಬಲಿಪುರಂನಲ್ಲಿ ವಿಶೇಷವಾದ ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ಇಲ್ಲಿನ ಐತಿಹಾಸಿಕ ಪಂಚರಥ ಸ್ಮಾರಕದ ಸಮೀಪವೇ 18 ಬಗೆಯ ಸಾವಯವ ತರಕಾರಿ ಗಳು ಹಾಗೂ ಹಣ್ಣುಗಳನ್ನು ಬಳಸಿಕೊಂಡು ಬೃಹತ್‌ ಸ್ವಾಗತ ಕಮಾನನ್ನು ನಿರ್ಮಿಸಲಾಗಿತ್ತು. ಈ ಕಮಾನಿನ ಅಲಂಕಾರಕ್ಕಾಗಿ ತೋಟಗಾರಿಕಾ ಇಲಾಖೆಯ ಸುಮಾರು 200 ಸಿಬ್ಬಂದಿ 10 ಗಂಟೆ ಕಾಲ ಶ್ರಮಿಸಿದ್ದರು.

ಚೆಟ್ಟಿನಾಡ್‌ನಿಂದ ಥಕ್ಕಾಲಿ ರಸಂವರೆಗೆ ಖಾದ್ಯಗಳ ದರ್ಬಾರ್‌
ಭಾರತ ಭೇಟಿಯಲ್ಲಿರುವ ಜಿನ್‌ಪಿಂಗ್‌ ಅವರಿಗೆ ಪ್ರಧಾನಿ ಮೋದಿ ಶುಕ್ರವಾರ ರಾತ್ರಿ ವಿಶೇಷ ಔತಣಕೂಟ ಆಯೋಜಿಸಿದ್ದರು. ಇಲ್ಲಿ ಚೆಟ್ಟಿನಾಡ್‌ನಿಂದ ಕರೈಕುಡಿವರೆಗೆ ತಮಿಳುನಾಡಿನ ಸಾಂಪ್ರದಾಯಿಕ ಖಾದ್ಯಗಳೇ ಸದ್ದು ಮಾಡಿದವು. ಅರಚವಿಟ್ಟ ಸಾಂಬಾರ್‌, ಕವನರಾಸಿ ಹಲ್ವ, ಕಡಲೆ ಕುರ್ಮ, ಥಕ್ಕಾಲಿ ರಸಂ ಮತ್ತಿತರ ಬಾಯಲ್ಲಿ ನೀರೂರಿಸುವಂಥ ಆಹಾರಗಳು ದಕ್ಷಿಣ ಭಾರತದ ಖಾದ್ಯ ವೈವಿಧ್ಯತೆಯನ್ನು ಸಾರಿದವು.

ಪ್ರತಿಭಟನಾಕಾರರು ವಶಕ್ಕೆ
ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ತಂಗಲಿರುವ ಚೆನ್ನೈನ ಪಂಚತಾರಾ ಹೋಟೆಲ್‌ ಹೊರಗಡೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಐವರು ಟಿಬೆಟಿಯನ್ನರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಟಿಬೆಟಿಯನ್‌ ಧ್ವಜ ಹಿಡಿದುಕೊಂಡು ದಿಢೀರ್‌ ಪ್ರತಿಭಟನೆಗೆ ಯತ್ನಿಸಿದವರನ್ನು ತಡೆದ ಪೊಲೀಸರು, ಘೋಷಣೆಗಳನ್ನು ಕೂಗದಂತೆಯೂ ತಡೆದು ಆಟೋರಿಕ್ಷಾದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.

ಗೋಬ್ಯಾಕ್‌ ಮೋದಿ ಹ್ಯಾಷ್‌ಟ್ಯಾಗ್‌: ಪಾಕ್‌ ಕುತಂತ್ರ ಬಯಲು
ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆಗೆ ಅನೌಪಚಾರಿಕ ಮಾತುಕತೆ ನಡೆಸಲು ಚೆನ್ನೈ ಆಗಮಿಸುತ್ತಿದ್ದಂತೆ ಟ್ವಿಟರ್‌ನಲ್ಲಿ “ಗೋ ಬ್ಯಾಕ್‌ ಮೋದಿ’ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಪ್ರತಿಭಟನೆ ಶುರುವಾಗಿತ್ತು. ಈ ಹ್ಯಾಷ್‌ಟ್ಯಾಗ್‌ನ ಮೂಲ ಹುಡುಕಿದಾಗ, ಇದನ್ನು ಟ್ರೆಂಡಿಂಗ್‌ ಮಾಡಿದ ಟ್ವಿಟರ್‌ ಖಾತೆಗಳು ಪಾಕಿಸ್ತಾನದಲ್ಲಿರುವುದು ತಿಳಿದುಬಂತು ಎಂದು ಸರ್ಕಾರ ತಿಳಿಸಿದೆ. ಅಲ್ಲದೆ ಇಂಥ ಕುಕೃತ್ಯದಲ್ಲಿ ತೊಡಗಿದ 25 ಹ್ಯಾಶ್‌ಟ್ಯಾಗ್‌ಗಳ ವಿವರಗಳನ್ನೂ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಮೂಲಕ ಪಾಕಿಸ್ತಾನದ ಕುತಂತ್ರವನ್ನು ಬಯಲು ಮಾಡಲಾಗಿದೆ. ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಟ್ವಿಟರ್‌ನಲ್ಲಿ ಕೃತ್ರಿಮವಾಗಿ ಈ ಕ್ರಮ ಕೈಗೊಂಡಿದೆ. ಶುಕ್ರವಾರ ಬೆಳಗ್ಗಿನಿಂದಲೇ ಮೈಕ್ರೋಬ್ಲಾಗಿಂಗ್‌ ಜಾಲತಾಣದಲ್ಲಿ ನೆರೆಯ ರಾಷ್ಟ್ರ ಹತಾಶೆಯ ಪ್ರಯತ್ನ ನಡೆಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಇಂದು ಏನು?
ಶನಿವಾರ ಬೆಳಗ್ಗೆ ಉಭಯ ನಾಯಕರು ಫಿಶರ್‌ವೆುನ್ಸ್‌ ಕೇವ್‌ ರೆಸಾರ್ಟ್‌ನಲ್ಲಿ ಪರಸ್ಪರ ಮಾತುಕತೆ ನಡೆಸಲಿದ್ದಾರೆ. ಅದಾದ ಬಳಿಕ ಎರಡೂ ದೇಶಗಳ ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ. ಮಧ್ಯಾಹ್ನ ಕ್ಸಿ ಅವರಿಗಾಗಿ ಪ್ರಧಾನಿ ಮೋದಿ ಔತಣಕೂಟ ಏರ್ಪಡಿಸಿದ್ದು, ಮಧ್ಯಾಹ್ನ 12.45ಕ್ಕೆ ಸರಿಯಾಗಿ ಜಿನ್‌ಪಿಂಗ್‌ ಚೆನ್ನೈ ಏರ್‌ಪೋರ್ಟ್‌ಗೆ ತೆರಳಿ ಅಲ್ಲಿಂದ ಚೀನಾಗೆ ವಾಪಸಾಗಲಿದ್ದಾರೆ.

ಮೋದಿಯವರೇ, ಕ್ಸಿ ಜಿನ್‌ಪಿಂಗ್‌ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುತ್ತಿದ್ದಾರೆ. ಅವರಿಗೆ ಚೀನಾ ಆಕ್ರಮಿಸಿರುವ 5,000 ಕಿ.ಮೀ. ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶವನ್ನು ತೆರವುಗೊಳಿಸಲು ಹೇಳಿ. ಆ ಮೂಲಕ ನಿಮ್ಮ 56 ಇಂಚಿನ ಎದೆ ಪ್ರದರ್ಶಿಸಿ.
ಕಪಿಲ್‌ ಸಿಬಲ್‌, ಕಾಂಗ್ರೆಸ್‌ ನಾಯಕ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.