ಯುವ ಉದ್ಯಮಿಗಳು ಅಭಿವೃದ್ಧಿಯ ಸೈನಿಕರಾಗಬೇಕು: ಪ್ರಧಾನಿ ಮೋದಿ
Team Udayavani, Aug 22, 2017, 7:20 PM IST
ಹೊಸದಿಲ್ಲಿ : ಯುವ ಉದ್ಯಮಶೀಲರು ದೇಶದ ಅಭಿವೃದ್ದಿಯ ಸೈನಿಕರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಸರಕಾರದಲ್ಲಿ ಜನ ಕಲ್ಯಾಣ ಮತ್ತು ಪ್ರಜೆಗಳ ಸಂತೋಷವೇ ಪರಮೋಚ್ಚವಾದದ್ದು ; ಆದುದರಿಂದ ಕೈಗಾರಿಕಾ ರಂಗದ ನಾಯಕರಾಗಿರುವ ನೀವು ದೇಶದ ಬಡವರಲ್ಲಿ ಬಡವರಿಗಾಗಿ ಏನನ್ನು ಮಾಡಬಹುದು ಎಂಬುದನ್ನು ಚಿಂತಿಸಬೇಕು ಎಂದು ಮೋದಿ ಅವರು ಇಂದಿಲ್ಲಿ 200ಕ್ಕೂ ಅಧಿಕ ಯುವ ಉದ್ಯಮಶೀಲರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದರು.
ಬಜಾಜ್ ಆಟೋ ಕಂಪೆನಿಯ ರಾಜೀವ್ ಬಜಾಜ್, ಫ್ಯೂಚರ್ ರೀಟೇಲ್ನ ಅವನಿ ಬಿಯಾನಿ ಮುಂತಾದ ಉದ್ಯಮಶೀಲರು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು.
ದೇಶದ ಪ್ರತಿಯೋರ್ವ ಪ್ರಜೆಗೂ ಈ ದೇಶ ನನ್ನದು ಎಂಬ ಭಾವನೆ ಇರಬೇಕು ಮತ್ತು ನಾನು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ; ಅದರ ಬೆಳವಣಿಗಾಗಿ ನಾನು ಏನಾದರೊಂದು ಕಾಣಿಕೆ ನೀಡಬೇಕು ಎಂಬ ಸಂಕಲ್ಪ ಇರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
2022ರೊಳಗೆ ದೇಶದ ಯುವ ಉದ್ಯಮಿಗಳು ಸಂಪೂರ್ಣವಾಗಿ ಕ್ಯಾಶ್ಲೆಸ್ (ನಗದು ರಹಿತ ವಹಿವಾಟುದಾರರು) ಆಗಬೇಕು ಎಂದು ಮೋದಿ ಕರೆ ನೀಡಿದರು.
ಪಾರ್ಕ್ ಹೊಟೇಲ್ನ ಪ್ರಿಯಾ ಪಂತ್ ಮತ್ತು ಎಸ್ಕಾರ್ಟ್ಸ್ ನ ನಿಖೀಲ್ ನಂದಾ ಸೇರಿದಂತೆ ಹಲವು ಪ್ರಮುಖ ಸಿಇಓಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ