ಮಲ್ಯ ಪರಾರಿಗೆ ಮೋದಿ ಆಪ್ತರ ನೆರವು
Team Udayavani, Sep 16, 2018, 10:19 AM IST
ಹೊಸದಿಲ್ಲಿ: ಉದ್ಯಮಿ ವಿಜಯ್ ಮಲ್ಯ ದೇಶ ತೊರೆಯಲು ಅನುವಾಗುವಂತೆ ಲುಕ್ಔಟ್ ನೋಟಿಸ್ನ ತೀವ್ರತೆಯನ್ನು ಬದಲಿಸಿದ್ದು ಪ್ರಧಾನಿ ನರೇಂದ್ರ ಮೋದಿಯ ಆಪ್ತ ಸಿಬಿಐ ಅಧಿಕಾರಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ರಾಹುಲ್, ಸಿಬಿಐನಲ್ಲಿರುವ ಗುಜರಾತ್ ಕೇಡರ್ನ ಎ. ಕೆ. ಶರ್ಮಾ ಈ ಕೃತ್ಯ ಎಸಗಿದ್ದು, ಪಿಎನ್ಬಿ ಹ ಗರಣದ ಪ್ರಮುಖ ಆರೋಪಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ದೇಶ ತೊರೆಯಲೂ ಇವರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ ಆರೋಪಕ್ಕೆ ಸಿಬಿಐ ಪ್ರತಿಕ್ರಿಯೆ ನೀಡಿದ್ದು, ಮಲ್ಯ ಬಂಧಿಸಲು ಸಾಕಷ್ಟು ಸಾಕ್ಷ್ಯಗಳು ಇಲ್ಲದ ಕಾರಣ ಲುಕ್ ಔಟ್ ನೋಟಿಸ್ ಬದಲಿಸಲಾಗಿದೆ. ಇದಕ್ಕೆ ಕಾನೂನು ನಿಯಮಗಳನ್ನು ಪಾಲಿಸ ಲಾಗಿದ್ದು, ಇದು ಯಾವುದೇ ನಿರ್ದಿಷ್ಟ ಅಧಿಕಾರಿಯ ನಿರ್ಧಾರವಲ್ಲ ಎಂದಿದೆ.