ಪುಲ್ವಾಮಾ ದಾಳಿ ನೆಚ್ಚಿಕೊಂಡು ಮೋದಿ ಪ್ರಚಾರಾಭಿಯಾನ: ಕಾಂಗ್ರೆಸ್
Team Udayavani, Feb 16, 2019, 1:28 PM IST
ಮುಂಬಯಿ : ಪುಲ್ವಾಮಾ ಉಗ್ರ ದಾಳಿಯನ್ನು ಬಂಡವಾಳವಾಗಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ದೇಶಪ್ರೇಮವನ್ನು ಬಡಿದೆಬ್ಬಿಸುವ ನೆಪದಲ್ಲಿ ಚುನಾವಣಾ ಪ್ರಚಾರಾಭಿಯಾನ ಕೈಗೊಂಡಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನಿ ಮೋದಿ ಅವರು ಇಂದು ಶನಿವಾರ ಮಹಾರಾಷ್ಟ್ರದ ಯವತ್ಮಾಲ್ ಮತ್ತು ಧುಳೆ ಯಲ್ಲಿ ಸಾರ್ವಜನಿಕ ಭಾಷಣ ಕಾರ್ಯಕ್ರಮಗಳಲ್ಲಿ ದಿನಪೂರ್ತಿ ಪಾಲ್ಗೊಂಡು “ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾಗಿರುವ ನಮ್ಮ ಸೈನಿಕರ ಬಲಿದಾನ ಎಷ್ಟು ಮಾತ್ರಕ್ಕೂ ವ್ಯರ್ಥವಾಗದಂತೆ ನಾವು ನೋಡಿಕೊಳ್ಳುತ್ತೇವೆ ಮತ್ತು ಉಗ್ರ ದಾಳಿ ನಡೆಸಿದವರನ್ನು ತಕ್ಕುದಾಗಿ ಶಿಕ್ಷಿಸಿಯೇ ತೀರುತ್ತೇವೆ’ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ರತ್ನಾಕರ್ ಮಹಾಜನ್ ಅವರು ಮೋದಿ ಅವರು ಮೃತ ಸೈನಿಕರ ಬಗ್ಗೆ ಸುಳ್ಳು ಕಾಳಜಿಯನ್ನು ತೋರಿಸುತ್ತಾ ತಮ್ಮನ್ನು ತಾವು ಬಯಲುಗೊಳಿಸಿದ್ದಾರೆ ಎಂದು ಟೀಕಿಸಿದರು.