ಕ್ಷಯ ರೋಗಿಯ ದತ್ತು: ಕೇಂದ್ರದ ಹೊಸ ಯೋಜನೆ; ನಿಕ್ಷಯ ಮಿತ್ರರಿಗೆ ಜವಾಬ್ದಾರಿ
ಕ್ಷಯ ಮುಕ್ತ ಭಾರತಕ್ಕೆ ಟೊಂಕ
Team Udayavani, Aug 11, 2022, 6:35 AM IST
ನವದೆಹಲಿ: ದೇಶವನ್ನು ಕ್ಷಯರೋಗ ಮುಕ್ತ ಮಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದ್ದು, ಅದಕ್ಕಾಗಿಯೇ ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ (ಪಿಎಂಟಿಬಿಎಂಬಿ) ಆರಂಭಿಸಲು ಸಜ್ಜಾಗಿದೆ.
ಈ ಯೋಜನೆಯ ಮೂಲಕ ಎನ್ಜಿಒಗಳು, ರಾಜಕಾರಣಿಗಳು, ಖಾಸಗಿ ಕಂಪನಿಗಳು ಅಥವಾ ವೈಯಕ್ತಿಕ ವ್ಯಕ್ತಿಗಳು ಕ್ಷಯ ರೋಗ ನಿಯಂತ್ರಣಕ್ಕೆ ಕೈ ಜೋಡಿಸಬಹುದಾಗಿದೆ.
ಈ ರೀತಿ ರೋಗ ನಿಯಂತ್ರಣಕ್ಕೆ ಮುಂದೆ ಬರುವವರನ್ನು “ನಿಕ್ಷಯ ಮಿತ್ರ’ ಎಂದು ಕರೆಯಲಾಗುವುದು. ಅವರು ದೇಶದ ಯಾವುದಾದರೂ ಕ್ಷಯ ರೋಗಿಯನ್ನು ದತ್ತು ರೂಪದಲ್ಲಿ ಪಡೆಯಬಹುದು. ದತ್ತು ಪಡೆದ ನಂತರ ಆ ರೋಗಿಗೆ ಸೂಕ್ತ ಪೌಷ್ಠಿಕ ಆಹಾರದ ವ್ಯವಸ್ಥೆ ಮಾಡಿಕೊಡುವುದು ಆ ನಿಕ್ಷಯ ಮಿತ್ರರ ಜವಾಬ್ದಾರಿಯಾಗಿರಲಿದೆ.
2025ರೊಳಗೆ ದೇಶವನ್ನು ಕ್ಷಯ ರೋಗ ಮುಕ್ತವನ್ನಾಗಿಸುವುದಾಗಿ ಪ್ರಧಾನಿ ಮೋದಿ ಅವರು 2018ರಲ್ಲಿಯೇ ಘೋಷಿಸಿದ್ದರು.