ತುರ್ತು ಸಭೆ ನಡೆಸಿ ಜೆಟ್ ಏರ್ ಸಮಸ್ಯೆ ಚರ್ಚಿಸಿದ ಪಿಎಂಒ
Team Udayavani, Apr 13, 2019, 6:00 AM IST
ಹೊಸದಿಲ್ಲಿ: ನಷ್ಟದ ಸುಳಿಗೆ ಸಿಲುಕಿರುವ ಜೆಟ್ ಏರ್ವೇಸ್ 50ಕ್ಕೂ ಕಡಿಮೆ ಹಾರಾಟ ನಡೆಸುತ್ತಿದ್ದು, ಕೇವಲ 11 ವಿಮಾನ ಹಾರಾಡುತ್ತಿವೆ. ಸೋಮವಾರ ದ ವರೆಗೆ ಅಂತಾರಾಷ್ಟ್ರೀಯ ಹಾರಾಟ ಸ್ಥಗಿತ ಗೊಳಿ ಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪ್ರಧಾನಿ ಸಚಿವಾಲಯ ಶುಕ್ರವಾರ ಸಂಜೆ ತುರ್ತು ಸಭೆ ಕರೆದಿದ್ದು, ಸನ್ನಿವೇಶದ ಬಗ್ಗೆ ಚರ್ಚೆ ನಡೆಸಿದೆ.
ಬ್ಯಾಂಕ್ಗಳನ್ನು ಜೆಟ್ ಏರ್ವೇಸ್ ಈಗಾಗಲೇ ಸಂಪರ್ಕಿಸಿದ್ದು, ಹೆಚ್ಚುವರಿ ಸಾಲ ಬಿಡುಗಡೆಗೆ ಕೋರಲಾಗಿದೆ ಎಂದು ವಿಮಾನಯಾನ ಸಚಿವಾಲ ಯದ ಕಾರ್ಯದರ್ಶಿ ಪಿ.ಎಸ್. ಖರೋಲಾ ಹೇಳಿದ್ದಾರೆ. ಜೆಟ್ ಏರ್ವೇಸ್ ನಷ್ಟದಿಂದಾಗಿ ಹಾರಾಟ ಸ್ಥಗಿತ ಗೊಳಿಸಿರುವ 16 ವಿಮಾನಗಳನ್ನು ಭೋಗ್ಯಕ್ಕೆ ಪಡೆ ಯುವುದಾಗಿ ಸ್ಪೈಸ್ ಜೆಟ್ ಘೋಷಿಸಿದೆ. ಬೋಯಿಂಗ್ 737-800 ವಿಮಾನ ಗಳನ್ನು ಸ್ಪೈಸ್ ಜೆಟ್ ಬಳಸಿಕೊಂಡು ದೇಶಿ ಹಾಗೂ ವಿದೇಶಿ ತಾಣಗಳಿಗೆ ಹಾರಾಟ ನಡೆಸಲಿದೆ.
ಇನ್ನೊಂದೆಡೆ ಪ್ರಯಾಣಿಕರೂ ಈ ವಿಮಾನ ರದ್ದತಿ ಯಿಂದಾಗಿ ತೊಂದರೆಗೀಡಾಗಿದ್ದು, ಕಳೆದ ವಾರದಿಂದ ವಿಮಾನ ದರ ವಿಪರೀತ ಏರಿಕೆ ಕಂಡಿದೆ. ಜೆಟ್ ಏರ್ವೇಸ್ ವಿಮಾನಗಳು ಕಳೆದ ಕೆಲವು ದಿನಗಳಿಂದ ಹಲವು ಬಾರಿ ಹಠಾತ್ ರದ್ದಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು