ಉಗ್ರರ ಹಿಡಿತದಲ್ಲಿ ಪಿಒಕೆ
ಪಾಕ್ ಆಕ್ರಮಿತ ಕಾಶ್ಮೀರ ಕುರಿತು ಸೇನಾ ಮುಖ್ಯಸ್ಥ ಜ|ರಾವತ್
Team Udayavani, Oct 26, 2019, 5:39 AM IST
ಹೊಸದಿಲ್ಲಿ/ಶ್ರೀನಗರ: “ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವು ಉಗ್ರರ ನಿಯಂತ್ರಣದಲ್ಲಿದೆ. ಅಲ್ಲದೆ ಪಿಒಕೆ ಮತ್ತು ಗಿಲ್ಗಿಟ್-ಬಾಲ್ಟಿಸ್ಥಾನವನ್ನು ಪಾಕಿಸ್ಥಾನವು ಅಕ್ರಮವಾಗಿ ಅತಿಕ್ರಮಣ ಮಾಡಿಕೊಂಡಿದೆ’ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ರದ್ದು ಮಾಡಿದ ಬಳಿಕ, ಪಿಒಕೆಯನ್ನು ವಶಪಡಿಸಿಕೊಳ್ಳುವತ್ತ ಸರಕಾರ ಗಮನ ನೆಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆಯೇ ಜ.ರಾವತ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆದ ಸೇನಾ ಕಮಾಂಡರ್ಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, “ಪಾಕಿಸ್ಥಾನವು ಅಕ್ರಮವಾಗಿ ವಶಪಡಿಸಿಕೊಂಡಿರುವ ಭೂಪ್ರದೇಶವನ್ನು ವಾಸ್ತವದಲ್ಲಿ ಪಾಕಿಸ್ಥಾನದ ಸರಕಾರ ನಿಯಂತ್ರಿಸುತ್ತಿಲ್ಲ. ಬದಲಿಗೆ, ಆ ಪ್ರದೇಶದ ಸಂಪೂರ್ಣ ನಿಯಂತ್ರಣ ಭಯೋತ್ಪಾದಕರ ಕೈಯ್ಯಲಿದೆ’ ಎಂದಿದ್ದಾರೆ.
ಜತೆಗೆ, ನಾವು ಜಮ್ಮು ಮತ್ತು ಕಾಶ್ಮೀರ ಎಂದರೆ, ಪಿಒಕೆ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನವನ್ನೂ ಒಳಗೊಂಡ ಪರಿಪೂರ್ಣ ಜಮ್ಮು-ಕಾಶ್ಮೀರ ರಾಜ್ಯ ಎಂದರ್ಥ. ಹೀಗಾಗಿ ಪಿಒಕೆ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನವನ್ನು ನಮ್ಮ ಪಶ್ಚಿಮದ ನೆರೆರಾಷ್ಟ್ರವು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ ಎಂದೇ ನಾವು ಹೇಳುತ್ತೇವೆ ಎಂದ ಜ.ರಾವತ್, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕ್ ಪ್ರಯತ್ನಿಸುತ್ತಲೇ ಇದೆ ಎಂದಿದ್ದಾರೆ.
ಮಾರ್ಗಸೂಚಿ ಕೇಳಿದ ಅಮೆರಿಕ: ಜಮ್ಮು-ಕಾಶ್ಮೀರದಲ್ಲಿ ರಾಜಕೀಯ ಮತ್ತು ಆರ್ಥಿಕ ಸಹಜತೆ ತರಲು ಕೈಗೊಳ್ಳುವ ಕ್ರಮಗಳ ಕುರಿತ ಮಾರ್ಗಸೂಚಿಯೊಂದನ್ನು ಸಲ್ಲಿಸುವಂತೆ ಭಾರತ ಸರಕಾರಕ್ಕೆ ಶುಕ್ರವಾರ ಅಮೆರಿಕ ಕೇಳಿದೆ. ಜತೆಗೆ, ಕಣಿವೆ ರಾಜ್ಯದಲ್ಲಿ ವಶದಲ್ಲಿರುವ ಎಲ್ಲ ರಾಜಕೀಯ ನಾಯಕರನ್ನೂ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಇದೇ ವೇಳೆ, ಪಾಕಿಸ್ಥಾನದ ವಿರುದ್ಧ ಹರಿಹಾಯ್ದಿರುವ ಅಮೆರಿಕ, ಭಯೋತ್ಪಾದಕರ ವಿರುದ್ಧ ಸುಸ್ಥಿರ ಮತ್ತು ಕಠಿಣವಾದ ಕ್ರಮವನ್ನು ಕೈಗೊಳ್ಳುವಂತೆ ಆದೇಶಿಸಿದೆ. ಈ ನಡುವೆ, ಕಾಶ್ಮೀರದ ಮಾನವ ಹಕ್ಕುಗಳ ಕುರಿತಾದ ವಿಚಾರಣೆಯು ಪಕ್ಷಪಾತದಿಂದ ಕೂಡಿತ್ತು ಎಂದು ಕಾಶ್ಮೀರಿ ಪಂಡಿತರ ಗುಂಪೊಂದು ಆರೋಪಿಸಿದೆ.
82 ದಿನ ಪೂರ್ಣ: ಕಣಿವೆ ರಾಜ್ಯದಲ್ಲಿ 370ನೇ ವಿಧಿ ರದ್ದುಗೊಳಿಸಿ ಶುಕ್ರವಾರ 82 ದಿನ ಪೂರ್ಣಗೊಂಡಿದೆ. ಪ್ರಮುಖ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಇನ್ನೂ ಅವಕಾಶ ನೀಡದ ಕಾರಣ, ಶ್ರೀನಗರದಲ್ಲಿನ ಐತಿಹಾಸಿಕ ಜಾಮಿಯಾ ಮಸೀದಿಯು ಸತತ 12ನೇ ಶುಕ್ರವಾರವೂ ಬಾಗಿಲು ಮುಚ್ಚಿದ್ದು, ಸುತ್ತಲೂ ಭದ್ರತಾ ಪಡೆಗಳ ಬಿಗಿಭದ್ರತೆ ಮುಂದುವರಿದಿದೆ.
6 ಲಕ್ಷ ಮೆ.ಟ. ಹಣ್ಣು ಸಾಗಣೆ: ಈ ಮಧ್ಯೆ, ಕಳೆದ 3 ತಿಂಗಳ ಅವಧಿಯಲ್ಲಿ ಸುಮಾರು 6 ಲಕ್ಷ ಮೆಟ್ರಿಕ್ ಟನ್ ಹಣ್ಣುಗಳನ್ನು ಕಾಶ್ಮೀರದಿಂದ ಹೊರಕ್ಕೆ ಸಾಗಣೆ ಮಾಡಲಾಗಿದೆ ಎಂದು ಜಮ್ಮು-ಕಾಶ್ಮೀರ ಸರಕಾರದ ಅಧಿಕೃತ ವಕ್ತಾರರು ಮಾಹಿತಿ ನೀಡಿದ್ದಾರೆ. 11 ದಿನಗಳಲ್ಲಿ ಉಗ್ರರು ಕಾಶ್ಮೀರೇತರ ನಾಲ್ವರನ್ನು ಹತ್ಯೆಗೈದಿದ್ದು, ಈ ಪೈಕಿ ಮೂವರು ಹಣ್ಣು ಹಂಪಲು ಸಾಗಿಸುವ ಟ್ರಕ್ಗಳ ಚಾಲಕರಾಗಿದ್ದಾರೆ.
ಮತ್ತೆ ಮಧ್ಯಸ್ಥಿಕೆಯ ಮಾತು
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಮತ್ತೆ ಮಧ್ಯಸ್ಥಿಕೆ ವಿಚಾರ ಪ್ರಸ್ತಾಪವಾಗಿದೆ. ಭಾರತ ಮತ್ತು ಪಾಕ್ ಕೇಳಿಕೊಂಡರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಸ್ಥಿಕೆ ವಹಿಸಿಕೊಳ್ಳಲು ಸಿದ್ಧ ಎಂದು ಅಮೆರಿಕ ಶುಕ್ರವಾರ ಪುನರುಚ್ಚರಿಸಿದೆ. ಜತೆಗೆ ರಚನಾತ್ಮಕ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥವಾಗಲಿ ಎಂದೂ ಹೇಳಿದೆ. ಇನ್ನೊಂದೆಡೆ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಗುಟೆರಸ್ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದು, ಎರಡೂ ದೇಶಗಳು ಪರಸ್ಪರ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.
ಮತ ದಾಖಲೆಗೆ ಸಂತಸ
ಗುರುವಾರ ಜಮ್ಮು-ಕಾಶ್ಮೀರದಲ್ಲಿ ನಡೆದ ರಾಜ್ಯದ ಮೊತ್ತ ಮೊದಲ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್(ಬಿಡಿಸಿ) ಚುನಾವಣೆಯಲ್ಲಿ ಶೇ.98.3 ಮತದಾನ ದಾಖಲಾಗಿ ರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷ ಸ್ಥಾನಮಾನ ರದ್ದತಿಯ ನಿರ್ಧಾರವೇ ದಾಖಲೆ ಮತದಾನಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯ 22 ಸೇರಿದಂತೆ 27 ಅಭ್ಯರ್ಥಿಗಳು ಅವಿರೋಧವಾಗಿ ಚುನಾಯಿತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..