2022ರ ವೇಳೆ ಪಿಓಕೆ ಭಾರತದ ವಶ: ಶಿವಸೇನಾ ಸಂಸದ ಸಂಜಯ್ ರಾವತ್
Team Udayavani, Sep 12, 2019, 8:17 AM IST
ಮುಂಬೈ: ಪಾಕ್ ಆಕ್ರಮಿತ ಕಾಶ್ಮೀರ ಭೂಭಾಗ 2022ರ ವೇಳೆ ಭಾರತದ ವಶವಾಗಲಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ.
ಕಾಶ್ಮೀರ ಭಾರತದ ಆಂತರಿಕ ವಿಷಯವೆಂದು ನರೇಂದ್ರ ಮೋದಿಯವರು ಈಗಾಗಲೇ ಅಮೇರಿಕಾಗೆ ಹೇಳಿದ್ದಾರೆ. ಇದರಿಂದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಹಿನ್ನಡೆಯಾಗಿದೆ. ಕಾಶ್ಮೀರವನ್ನು ಭಾರತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಪಿಓಕೆ ಕೂಡಾ ಆದಷ್ಟು ಬೇಗ ನಮ್ಮ ಕೈವಶವಾಗಲಿದೆ. 2022ರ ವೇಳೆಗೆ ಅಖಂಡ ಭಾರತದ ಕನಸು ನನಸಾಗಲಿದೆ ಎಂದು ಶಿವಸೇನಾ ಸಂಸದ ಹೇಳಿದ್ದಾರೆ.
ಶಿವಸೇನಾ ಪಕ್ಷವು ಜಮ್ಮು ಕಾಶ್ಮೀರದ ವಿಶೇಷ ಅಧಿಕಾರ ರದ್ದಾದಾಗ ನರೇಂದ್ರ ಮೋದಿ ಸರಕಾರವನ್ನು ಬೆಂಬಲಿಸಿತ್ತು.