ಏಕಕಾಲದ ಚುನಾವಣೆಗೆ ನೀತಿ ಆಯೋಗ ಬೆಂಬಲ
Team Udayavani, Aug 28, 2017, 7:10 AM IST
ನವದೆಹಲಿ: ಚುನಾವಣೆ ವೆಚ್ಚ, ನಿರ್ವಹಣೆ ಸುಲಭವಾಗಿಸುವ ಉದ್ದೇಶದಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದರ ಬಗ್ಗೆ ದೇಶದ ಚಿಂತಕ ಚಾವಡಿ, ನೀತಿ ಆಯೋಗ ಬೆಂಬಲ ವ್ಯಕ್ತಪಡಿಸಿದೆ. 2024ರಿಂದ ಈ ಪದ್ಧತಿಯನ್ನು “ರಾಷ್ಟ್ರಿಯ ಹಿತಾಸಕ್ತಿ’ಗೆ ಅನುಗುಣವಾಗಿ ಜಾರಿಗೊಳಿಸುವುದಕ್ಕೆ ಬೆಂಬಲ ಸೂಚಿಸಿದೆ.
ದೇಶದಲ್ಲಿ ನಡೆವ ಎಲ್ಲಾ ಚುನಾವಣೆಗಳು, ಮುಕ್ತ ಪಾರದರ್ಶಕವಾಗಿ ಮತ್ತು ಏಕಕಾಲಕ್ಕೆ ನಡೆಯಬೇಕು. ಇದು ಕನಿಷ್ಠ ಪ್ರಚಾರದಿಂದ ಕೂಡಿದ್ದು, ಆಡಳಿತಕ್ಕೆ ಭಂಗ ತರದೇ ಇರಬೇಕು ಎಂದು ನೀತಿ ಆಯೋಗ ತನ್ನ “ಮೂರು ವರ್ಷದ ಕಾರ್ಯಕಾರಿ ಯೋಜನೆ 2017-18ರಿಂದ 2019-20’ರ ವರದಿಯಲ್ಲಿ ಹೇಳಿದೆ.
2024ರಿಂದ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದರ ಬಗ್ಗೆ ನಾವು ಕೆಲಸ ಆರಂಭವಿಸುವ ನಿರೀಕ್ಷೆ ಇದೆ. ಹೀಗೆ ಮಾಡಲು ಕೆಲವು ವಿಧಾನಸಭೆಗಳ ಅವಧಿ ಮೊಟಕುಗೊಳ್ಳಬಹುದು ಅಥವಾ ವಿಸ್ತಾರವಾಗ ಬಹುದು. ಈ ಪದ್ಧತಿಯನ್ನು ರಾಷ್ಟ್ರೀಯ ಹಿತಾಸಕ್ತಿಗಾಗಿ ಜಾರಿಗೊಳಿಸಲು, ಸಂವಿಧಾನ ತಜ್ಞರು, ಚಿಂತಕರು, ಸರ್ಕಾರಿ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಿತಿಯೊಂದನ್ನು ರಚಿಸಬೇಕಿದ್ದು, ಈ ಬಗ್ಗೆ ಗಹನವಾದ ಚರ್ಚೆ ನಡೆಸಬೇಕಿದೆ. ಜೊತೆಗೆ ಇದಕ್ಕೆ ಸಂವಿಧಾನ ತಿದ್ದು ಪಡಿಯ ಕರಡನ್ನೂ ರೂಪಿಸಬೇಕಿದ್ದು, ರೂಪುರೇಷೆ ಗಳನ್ನು ಸಿದ್ಧಪಡಿಸ ಬೇಕಿದೆ ಎಂದಿದೆ. ಇದರೊಂದಿಗೆ ಏಕಕಾಲಕ್ಕೆ ಚುನಾ ವಣೆ ನಡೆಸುವ ಶಿಫಾರಸಿನ ಬಗ್ಗೆ ಚುನಾವಣಾ ಆಯೋಗ, ದೃಷ್ಟಿ ಹರಿಸಬೇಕಿದ್ದು, ಮಾ.2018ರ ವೇಳೆಗೆ ಒಂದು ಸಮಯದ ಚೌಕಟ್ಟು ರೂಪಿಸಬೇಕಿದೆ ಎಂದೂ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಬಹು ದಿನಗಳಿಂದಲೇ ಈ ವಿಚಾರದ ಬಗ್ಗೆ ಹೇಳುತ್ತಲೇ ಬಂದಿದ್ದು, ವಿವಿಧ ವೇದಿಕೆಗಳಲ್ಲೂ ಪ್ರಸ್ತಾಪ ಮಾಡಿದ್ದಾರೆ.
ಟ್ರಾಫಿಕ್ ಕೇಸು ವಿಚಾರಣೆ ಪ್ರತ್ಯೇಕ ಕೋರ್ಟ್ : ಇನ್ನು, ಟ್ರಾಫಿಕ್ ಕೇಸುಗಳ ವಿಚಾರಣೆಗೆ ಪ್ರತ್ಯೇಕ ಕೋರ್ಟ್ ಸ್ಥಾಪಿಸುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ. ಈ ಕೋರ್ಟ್ಗಳಲ್ಲಿ ನ್ಯಾಯಾಧೀಶರು ದಂಡ ಕಟ್ಟುವಂತೆ ಹೇಳುವವರೆಗೂ, ದಂಡ ಕಟ್ಟ ಬೇಕೆಂದಿಲ್ಲ. ಶಿಫಾರಸನ್ನು ಕೇಂದ್ರ ಕಾನೂನು ಸಚಿ ವಾಲಯಕ್ಕೆ ಸಲ್ಲಿಸಲಾಗಿದ್ದು, ಈ ವಿಶೇಷ ಕೋರ್ಟ್ ಗಳಿಗೆ ಕಾನೂನು ಪದವೀಧರರನ್ನು ನ್ಯಾಯದಾನಕ್ಕಾಗಿ ನೇಮಕ ಮಾಡಿಕೊಳ್ಳಬೇಕು ಎಂದಿದೆ. ಇದರಿಂದ ಕೆಳ ಹಂತದ ಕೋರ್ಟ್ಗಳು ಇತರ ಪ್ರಕರಣಗಳಲ್ಲಿ ನ್ಯಾಯದಾನ ಮಾಡುವುದು ಸುಲಭವಾಗುತ್ತದೆ. ಕೇಸುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಹೊಸ ಐಡಿಯಾವೊಂದನ್ನು ನೀತಿ ಆಯೋಗ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ