ರಾಷ್ಟ್ರ ರಾಜಧಾನಿಯಲ್ಲಿ ಸುಧಾರಿಸಿದ ವಾಯು ಮಾಲಿನ್ಯ ಮಟ್ಟ
Team Udayavani, Oct 2, 2019, 9:20 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕಳೆದ ಒಂದು ವರ್ಷದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ಮಟ್ಟ ಸುಧಾರಿಸಿದೆ ಎಂದು ಅಲ್ಲಿನ ಸಂಶೋಧನಾ ಸಂಸ್ಥೆಯ ವರದಿಯೊಂದು ತಿಳಿಸಿದೆ. ಹೊಸದಿಲ್ಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿ.ಎಸ್.ಇ.) ಅಧ್ಯಯನ ಕೇಂದ್ರ ವಾಯುಮಾಲಿನ್ಯದ ಸ್ಥಿತಿಗತಿ ತಿಳಿದುಕೊಳ್ಳುವ ದೃಷ್ಟಿಯಿಂದ ಸಂಶೋಧನೆ ನಡೆಸಿದ್ದು, ಶೇ.25 ಮಾಲಿನ್ಯದ ಮಟ್ಟ ಸುಧಾರಿಸಿದೆ ಎಂದು ತನ್ನ ವರದಿಯಲ್ಲಿ ಅದು ತಿಳಿಸಿದೆ.
ಪಿ.ಎಂ. 2.5 ವಿಷ ಕಣಗಳ ಇಳಿಕೆ
ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದ ಪಿ.ಎಂ.2.5 ವಿಷ ಕಣಗಳ ಮಟ್ಟ ಇಳಿಕೆಯಾಗಿದ್ದು, ಇದು ವಾಹನಗಳ ಹೊಗೆಯಿಂದ ಉತ್ಪತ್ತಿಯಾಗುವ ಅತ್ಯಂತ ವಿಷಕಾರಿ ಕಣಗಳಾಗಿವೆ. ಇನ್ನೂ ಈ ವಿಷಕಣಗಳಿಂದ ಹೆಚ್ಚು ಮಾಲಿನ್ಯ ಉಂಟಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಇದರ ಮಟ್ಟ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ ಎಂದು ಸಂಶೋಧನಾ ವರದಿ ತಿಳಿಸಿದೆ.
ಶೇ.25 ರಷ್ಟು ಸುಧಾರಣೆ
ಅಧಿಕೃತ ಅಂಕಿ ಅಂಶಗಳ ಪ್ರಕಾರ 2016 ರಿಂದ 2019 ರವರೆಗೆ ಕೆಟ್ಟ ಮಾಲಿನ್ಯಕಾರಕಗಳಲ್ಲಿ ಒಂದಾಗಿದ್ದ ಸಣ್ಣ ಪಿಎಂ 2.5 ಕಣಗಳ ಸರಾಸರಿ ಮಟ್ಟವು 25% ಕಡಿಮೆಯಾಗಿದೆ. 2016ರಲ್ಲಿ ಸುಮಾರು ಶೇ.140 ರಷ್ಟು ಪಿಎಂ 2.5 ವಿಷ ಕಣಗಳು ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿತ್ತು ಆದರೆ ಈ ವರ್ಷ ಇದರ ಪ್ರಮಾಣದಲ್ಲಿ ಶೇ.25ರಷ್ಟು ಇಳಿಕೆಯಾಗಿದೆ.
ಸಂಶೋಧನೆಯ ಪ್ರಮುಖ ಅಂಶಗಳು
– ದಿನನಿತ್ಯ ಹೊರಸೂಸುತ್ತಿದ್ದ ಪಿ.ಎಂ 2.5 ಗರಿಷ್ಠ ಮಟ್ಟ ಕಡಿಮೆಯಾಗಿದೆ.
– ಕಲುಷಿತ ವಾತವಾರಣದ ಸಮಸ್ಯೆಯ ತೀವ್ರತೆ ಸುಧಾರಿಸಿದೆ.
– ಪಿ.ಎಂ 2.5 ಬಿಡುಗಡೆ ಮಾಡುವ ವಾಹನಗಳ ಸಂಖ್ಯೆ ಕಡಿಮೆಯಾಗಿದೆ.
ಯಾಕೆ ಅಪಾಯಕಾರಿ ?
– ಈ ವಿಷಕಣಗಳು ದೇಹದೊಳಗೆ ಸೇರುವುದರಿಂದ ಶ್ವಾಸಕೋಶ ಕ್ಯಾನ್ಸರ್ ರೀತಿಯ ಅಪಾಯಕಾರಿ ಕಾಯಿಲೆ ಬರುತ್ತದೆ.
– ಪಿಎಂ 2.5 ವಿಷಕಾರಿ ಕಣಗಳಿಂದ 10ರಲ್ಲಿ 1 ಮಗುವಿಗೆ ಅಸ್ತಮಾ ರೋಗ ಬರುತ್ತದೆ.
– ಈ ಕಣಗಳು ಗಾಳಿಯೊಂದಿಗೆ ಬೆರೆಯುವುದರಿಂದ ಅನಾರೋಗ್ಯದ ಸಮಸ್ಯೆಯ ಮಟ್ಟ ಹೆಚ್ಚುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ